Slide
Slide
Slide
previous arrow
next arrow

ಪ್ರೀತಿಸುತ್ತಿದ್ದ ಯುವತಿಯ ಮನೆಯವರಿಂದ ಮಗನ ಜೀವಕ್ಕೆ ಅಪಾಯ; ತಂದೆಯ ಆರೋಪ

300x250 AD

ಕಾರವಾರ: 22 ವರ್ಷದ ಮಗ ಮೂರು ತಿಂಗಳಿನಿಂದ ಕಾಣೆಯಾಗಿದ್ದು, ಪೊಲೀಸ್ ದೂರು ನೀಡಿದರೂ ಹೇಗಿದ್ದಾನೆಂದು ಇದುವರೆಗೂ ಮಾಹಿತಿ ಬಂದಿಲ್ಲ. ಪ್ರೀತಿಸುತ್ತಿದ್ದ ಯುವತಿಯ ಮನೆಯವರಿಂದಲೇ ಮಗನ ಜೀವಕ್ಕೆ ಅಪಾಯ ಉಂಟಾಗಿರುವ ಸಂಶಯವಿದೆ ಎಂದು ಕಾಣೆಯಾಗಿರುವ ಯುವಕನ ತಂದೆ ಅನಂತ ಸಿದ್ದಿ ಆರೋಪಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗ ಸಚಿನ್ ಸಿದ್ದಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ಮನೆಗೆ ಮೂರು ತಿಂಗಳ ಹಿಂದೆ ಭೇಟಿ ನೀಡಿದ್ದಾಗಿನಿಂದ ಕಾಣೆಯಾಗಿದ್ದಾನೆ. ಯುವತಿಯ ಕುಟುಂಬದವರು ಹಾಗೂ ಮಗನ ಈರ್ವರು ಸ್ನೇಹಿತರಿಂದ ನನ್ನ ಮಗನ ಜೀವಕ್ಕೆ ಅಪಾಯ ಉಂಟಾಗಿರುವ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
ಮಗ ಕಾಣೆಯಾಗಿರುವ ವಿಷಯವನ್ನ ನಮಗೆ ತಿಳಿಸದೇ ಯುವತಿಯ ಕಡೆಯವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ನಾವು ಕೂಡ ಅಂಕೋಲಾ ಪೊಲೀಸ್ ಠಾಣೆಗೆ ಮಗನನ್ನು ಹುಡುಕಿಕೊಡುವಂತೆ ಹಾಗೂ ಯುವತಿಯ ಮನೆಯವರ ಮೇಲೆ ಸಂಶಯವಿರುವ ಬಗ್ಗೆ ದೂರು ದಾಖಲಿಸಿದ್ದೇವೆ. ಆದರೆ ಈವರೆಗೆ ಮಗನ ಸುಳಿವು ಸಿಕ್ಕಿಲ್ಲ. ನಮಗೆ ಗೊತ್ತಿಲ್ಲದಂತೆ ಮಗನಿಂದ ಯುವತಿಯ ಕುಟುಂಬ ಹಣ ಪಡೆದು, ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನೆಲ್ಲ ಖರೀದಿಸಿದೆ. ಯುವತಿ ಕೂಡ ಗಾಯಗೊಂಡು ಆರೈಕೆಯಲ್ಲಿದ್ದಿದ್ದರಿಂದ ನನ್ನ ಮಗನ ನೆರವು ಪಡೆದಿದ್ದಾರೆ. ಆದರೆ ನಂತರದಲ್ಲಿ ಏನು ನಡೆದಿದೆ ಎಂಬುದು ತಿಳಿದಿಲ್ಲ. ಆಕೆಯ ಮನೆಗೆ ಭೇಟಿ ನೀಡಿದ್ದೆ ಕೊನೆ, ಅಲ್ಲಿಂದ ಆತ ನಾಪತ್ತೆಯಾಗಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top