Slide
Slide
Slide
previous arrow
next arrow

ಕಳ್ಳತನ ಪ್ರಕರಣ: 24 ಗಂಟೆಯೊಳಗೆ ಕಳ್ಳನ ಬಂಧನ

300x250 AD

ಹೊನ್ನಾವರ: ಚಂದಾವರ ಸಮೀಪ ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯೊಳಗೆ ಪ್ರಕರಣ ಭೇದಿಸುವ ಮೂಲಕ ಪೊಲೀಸರು ಸಾರ್ವಜನಿಕ ವಲಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಭಾನುವಾರ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಎನ್ನುವವರು ಚಂದಾವರದಲ್ಲಿ ಮದುವೆ ಮುಗಿಸಿ ಟೆಂಪೊಗೆ ಕಾಯುತ್ತಿದ್ದಾಗ ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಎಗರಿಸಿ ವ್ಯಕ್ತಿಯೋರ್ವ ಪರಾರಿಯಾಗಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ನಂತರ ದೂರು ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿ ಸೋಮವಾರ ಮುಂಜಾನೆ ಪ್ರಕರಣ ಭೇದಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಹೊದಿಕೆಶಿರೂರು ಹೂವಿನಹಿತ್ತಲಿನ ಗಣಪತಿ ಗೌಡ ಎನ್ನುವವನನ್ನು ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದು, 39 ಗ್ರಾಂ. ಚಿನ್ನದ ಸರವನ್ನು ಜಪ್ತುಪಡಿಸಿಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಸಿಪಿಐ ಶ್ರೀಧರ ಎಸ್.ಆರ್., ಪಿಎಸೈ ಮಹಾಂತೇಶ ನಾಯಕ, ಗಣೇಶ ನಾಯ್ಕ, ಸಾವಿತ್ರಿ ನಾಯಕ, ಎಮ್.ವಿ.ಚಂದಾವರ, ಸಿಬ್ಬಂದಿ ಪ್ರಶಾಂತ ನಾಯ್ಕ, ಮಹಾವೀರ, ರಮಾನಂದ ನಾಯ್ಕ, ಸಂತೋಷ ನಾಯ್ಕ, ಕೃಷ್ಣ ಗೌಡ, ಉದಯ ಮಗದೂರು, ಶಿವಾನಂದ ಚಿತ್ರರಗಿ, ಚಂದ್ರಶೇಖರ ನಾಯ್ಕ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top