Slide
Slide
Slide
previous arrow
next arrow

ಜಿಲ್ಲಾ ಪಂಚಾಯತ್ CEO ಪ್ರಿಯಾಂಗಾ ಎಂ. ವರ್ಗಾವಣೆ

300x250 AD

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುವುದರ ಮೂಲಕ ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿದ್ದ ಪ್ರಿಯಂಗಾ ಎಂ ವರ್ಗಾವಣೆಗೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಎಂ.ಡಿ ಯಾಗಿ ಪ್ರಿಯಾಂಗಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಜಾಗದಲ್ಲಿ ಐಎಎಸ್ ಅಧಿಕಾರಿ ಈಶ್ವರ ಖಾಂಡೋರರನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನ ಸಿಇಓ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

300x250 AD

ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ತುರ್ತು ಸ್ಪಂದನೆ ಹಾಗೂ ಜನರ ಜೊತೆಗೆ ಪ್ರೀತಿಯ ಒಡನಾಟ ಬೆಳೆಸಿಕೊಂಡು ಜನತೆಯ ಪ್ರೀತಿಗಳಿಸಿದ ಪ್ರಿಯಾಂಗಾ ಎಂ. ಇದೀಗ ವರ್ಗಾವಣೆಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top