Slide
Slide
Slide
previous arrow
next arrow

ಮಾಜಿ ಸೈನಿಕರಿಗೆ ನಿವೇಶನ ಮಂಜೂರಿಗೆ ಆಗ್ರಹ

300x250 AD

ಯಲ್ಲಾಪುರ: ತಾಲೂಕಿನ ಮಾಜಿ ಸೈನಿಕರಿಗೆ ಕೃಷಿ ಭೂಮಿ, ನಿವೇಶನ ಹಾಗೂ ಸೈನಿಕರ ಮಾಹಿತಿ ಕೇಂದ್ರ ಮಂಜೂರಿ ಮಾಡುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಯಲ್ಲಾಪುರ ಘಟಕದವರು ತಹಶೀಲ್ದಾರ ಅವರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಯಾರೆಲ್ಲಾ ಮಾಜಿ ಸೈನಿಕರು ಕೃಷಿ ಭೂಮಿ ಮಂಜೂರಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ, ಅವರಿಗೆಲ್ಲ ಸರ್ಕಾರದ ಹೊಸ ಆದೇಶದ ಅನ್ವಯ ಶೀಘ್ರವಾಗಿ ಕೃಷಿ ಭೂಮಿಯನ್ನು ಹಾಗೂ ನಿವೇಶನ ಮಂಜೂರಿ ಮಾಡಬೇಕಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.
ಮಾಜಿ ಸೈನಿಕರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಮಾಜಿ ಸೈನಿಕರ ಮನವಿಯನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಭರವಸೆ ನೀಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎಸ್.ಕೆ, ತಾಲೂಕ ಅಧ್ಯಕ್ಷ ತುಳಸಿದಾಸ ನಾಯ್ಕ, ಗೌರವಾಧ್ಯಕ್ಷ ಮಂಜುನಾಥ ನಾಯ್ಕ, ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಸಹ ಕಾರ್ಯದರ್ಶಿ ಪರಶುರಾಮ ಎಸ್ ನಾಯ್ಕ, ಸಂಘಟನಾ ಕಾರ್ಯದರ್ಶಿ ಪ್ರವೀಣ ಫಾಯ್ದೆ, ನಿರ್ದೇಶಕರಾದ ಕೃಷ್ಣ ಗೌಡ, ರಾಘವೇಂದ್ರ ಗೋಂದಳಿ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಇದ್ದರು

300x250 AD
Share This
300x250 AD
300x250 AD
300x250 AD
Back to top