Slide
Slide
Slide
previous arrow
next arrow

ಅಂಜನಾದ್ರಿ ಯಾತ್ರೆ ಕೈಗೊಂಡ ಹನುಮ ಮಾಲಾಧಾರಿಗಳು

300x250 AD

ದಾಂಡೇಲಿ: ನಗರದ ಬಜರಂಗ ದಳದ ವತಿಯಿಂದ ಸತತ 8 ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವ ಅಂಜನಾದ್ರಿ ಯಾತ್ರೆಗೆ ಸೋಮವಾರ ನಗರದ ಬರ್ಚಿ ರಸ್ತೆಯಲ್ಲಿರುವ ಶ್ರೀಹನುಮಾನ್ ಮಂದಿರದಲ್ಲಿ ಚಾಲನೆ ನೀಡಲಾಯಿತು.
ಕಳೆದ ಒಂದು ತಿಂಗಳಿನಿ0ದ ಹನುಮ ಮಾಲಾಧಾರಣೆಯೊಂದಿಗೆ ವಿವಿಧ ವೃತಾಚರಣೆಯನ್ನು ನಿಯಮಬದ್ಧವಾಗಿ ಪಾಲಿಸಿದ ಒಟ್ಟು 110 ಮಾಲಾಧಾರಿಗಳು ಶ್ರೀಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆನಂತರ ಕೇರವಾಡದ ಶ್ರೀದಾಂಡೇಲಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತಕ್ಕೆ ಯಾತ್ರೆ ತೆರಳಿದರು.
ಬಜರಂಗ ದಳದ ಪ್ರಮುಖರಾದ ಚಂದ್ರು ಮಾಳಿ, ನಾಗರಾಜ ಅನಂತಪುರ, ವಿನಯ್ ದಳವಾಯಿ, ಲಿಂಗಯ್ಯಾ ಪೂಜಾರ್, ರಾಜೇಶ್ ಗಿರಿ, ಮಂಜು ರಾಮಸ್ವಾಮಿ, ಲಾಲ್ ಸಿಂಗ್, ರವಿ ಚೌವ್ಹಾನ್ ಮೊದಲ ನೇತೃತ್ವದಲ್ಲಿ ಅಂಜನಾದ್ರಿ ಯಾತ್ರೆಯನ್ನು ಕೈಗೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top