• Slide
    Slide
    Slide
    previous arrow
    next arrow
  • ಸಾರಿಗೆ ಬಸ್ ಸಮಸ್ಯೆ ಸರಿಪಡಿಸಲು ಆಗ್ರಹ: ಮನವಿ ಸಲ್ಲಿಕೆ

    300x250 AD

    ಕುಮಟಾ: ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ಸೌಕರ್ಯವಿಲ್ಲದೇ ಸರಿಯಾದ ಸಮಯಕ್ಕೆ ತರಗತಿಗೆ ಹೋಗಲಾಗುತ್ತಿಲ್ಲ. ಈ ಅವ್ಯವಸ್ಥೆ ಸರಿಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಡಿಪ್ಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
    ಬಸ್ ಪಾಸನ್ನ ಪಡೆದುಕೊಂಡು ಹಳ್ಳಿ ಹಾಗೂ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಾಯಂಕಾಲ ಸಾಕಷ್ಟು ರೀತಿಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಕುಮಟಾ ಘಟಕದಿಂದ ಈ ಕೂಡಲೇ ಯಾವ ಮಾರ್ಗಕ್ಕೆ ಎಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ ಎನ್ನುವ ಮಾಹಿತಿ ಕಲೆಹಾಕಿ ಅದರ ಅನುಸಾರವಾಗಿ ಬಸ್ಸನ್ನ ವ್ಯವಸ್ಥೆ ಮಾಡುವ ಮುಖಾಂತರ ಯಾವುದೇ ರೀತಿಯ ವಿದ್ಯಾರ್ಥಿಗಳಿಗೆ ತೊಂದರೆಯಾಗದ0ತೆ ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
    ವಿದ್ಯಾರ್ಥಿಗಳಿಂದ ಪಾಸ್ ಕೊಡಲು ಸರಿಯಾದ ಹಣವನ್ನ ಪಾವತಿ ಮಾಡಿಸುತ್ತಾರೆ. ಆದರೆ ಸರಿಯಾದ ವ್ಯವಸ್ಥೆಯನ್ನು ಸಾರಿಗೆ ಘಟಕವು ನಿರ್ವಹಿಸುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನ ಉಗ್ರ ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಸಂಘಟನೆಯ ಬಲಿಂದ್ರ ಗೌಡ, ಮಹೇಶ್ ಕಾಡಿಗ,ಸುಬ್ರಹ್ಮಣ್ಯ ಗೌಡ, ನಾಗರಾಜ್ ಗೌಡ, ಶ್ರೀಕಾಂತ್ ಪಟಗಾರ, ಸಂದೇಶ್ ನಾಯಕ್, ನಾರಾಯಣ ಮುಕ್ರಿ, ದೀಪಕ್ ಭಂಡಾರಿ, ಗಜಾನನ್ ಅಂಬಿಗ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top