Slide
Slide
Slide
previous arrow
next arrow

ಹೊಸ ಪಿಂಚಣಿ ಸೌಲಭ್ಯ ರದ್ದು ಪಡಿಸಲು ಆಗ್ರಹ: ಡಿ.3ಕ್ಕೆ ಮನವಿ ಸಲ್ಲಿಕೆ

300x250 AD

ಶಿರಸಿ: ಹೊಸ‌‌ ಪಿಂಚಣಿ ಸೌಲಭ್ಯ (NPS) ರದ್ದು‌ ಪಡಿಸಿ ಹಳೆಪಿಂಚಣಿ ಸೌಲಭ್ಯವನ್ನು(OPS) ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ NPS ನೌಕರ ಸಂಘ ಶಿರಸಿ ತಾಲೂಕು ಘಟಕ ಇವರಿಂದ ಡಿ.3,ಶನಿವಾರ ಮಧ್ಯಾಹ್ನ ಜಾಥಾ ಮೂಲಕ ಮನವಿ ಸಲ್ಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಗರದ ಅಂಬೇಡ್ಕರ್ ಭವನದಲ್ಲಿ,ಶನಿವಾರ ಮಧ್ಯಾಹ್ನ 2.30ಕ್ಕೆ NPS ಕಾರ್ಯಾಗಾರ ಏರ್ಪಡಿಸಿದ್ದು, ತದನಂತರ ಅಂಬೇಡ್ಕರ್ ಭವನದಿಂದ ಜಾಥಾ ಹೊರಟು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಕೊಡುವ ಉದ್ದೇಶವಿರುವುದರಿಂದ ತಾಲೂಕಿನ ಸಮಸ್ತ NPS ನೌಕರರು ಭಾಗವಹಿಸಿ OPS ಹೋರಾಟಕ್ಕೆ ಕೈಜೋಡಿಸಬೇಕೆಂದು ಶಿರಸಿ ತಾಲೂಕಾ ಘಟಕದಿಂದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

300x250 AD

Share This
300x250 AD
300x250 AD
300x250 AD
Back to top