Slide
Slide
Slide
previous arrow
next arrow

ಜನ್ಮ ದಿನದಂದೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಬಸ್ ಚಾಲಕ

300x250 AD

ಯಲ್ಲಾಪುರ: ಹುಟ್ಟು ಹಬ್ಬ ಆಚರಿಸಲು ಊರಿಗೆ ತೆರಳಿದ್ದ ಯಲ್ಲಾಪುರ ಕೆ ಎಸ್ ಆರ್ ಟಿ ಸಿ ಚಾಲಕ ಅದೇ ದಿನ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅನವಟ್ಟಿಯಲ್ಲಿ ನಡೆದಿದೆ.

ಯಲ್ಲಾಪುರ ಬಸ್ ಘಟಕದಲ್ಲಿ ಕಳೆದ ಹತ್ತು ವರ್ಷದಿಂದ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅನವಟ್ಟಿ ಮೂಲದ ಭಾಸ್ಕರ ಜೆ. ಕೆ ತಮ್ಮ ಜನ್ಮದಿನದಂದು ಮೃತಪಟ್ಟ ದುರ್ದೇವಿಯಾಗಿದ್ದಾರೆ. ಮೃತರಿಗೆ 54 ವರ್ಷ ವಯಸ್ಸಾಗಿತ್ತು. ಭಾಸ್ಕರ ಜೆ. ಕೆ ಅವರ ಕುಟುಂಬದವರು ಆನವಟ್ಟಿಯಲ್ಲಿ ವಾಸವಾಗಿದ್ದಾರೆ. ಕುಟುಂಬದವರ ಜೊತೆಸೇರಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಅವರು ಊರಿಗೆ ತೆರಳಿದ್ದರು. ನ.30ರ ಸಂಜೆ ಹುಟ್ಟು ಹಬ್ಬ ಆಚರಿಸುವ ಸಿದ್ಧತೆಯ ಮಧ್ಯ ಮೃತರಾಗಿದ್ದಾರೆ.

300x250 AD

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಮಸ್ತ ಯಲ್ಲಾಪುರ ಕೆಎಸ್ಆರ್ಟಿಸಿ ಘಟಕದ ಅಧಿಕಾರಿಗಳು. ಸಿಬ್ಬಂದಿಗಳು, ಮತ್ತು ಘಟಕದ ದೇವಸ್ಥಾನದ ಅರ್ಚಕರು. ಪ್ರಸಾದ ಭಟ್ಟ್ ಪ್ರಾರ್ಥಿಸಿ ದುಃಖ ದುಃಖ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top