• Slide
    Slide
    Slide
    previous arrow
    next arrow
  • ‘ಸಚಿವ ಪೂಜಾರಿ, ಸುನೀಲಕುಮಾರ್ ಈಡಿಗರನ್ನ ಬಲಿ ಕೊಡುತ್ತಿದ್ದಾರೆ’

    300x250 AD

    ಕುಮಟಾ: ಈಡಿಗ, ಬಿಲ್ಲವ, ನಾಮಧಾರಿ ಸಮಾಜಕ್ಕೆ ಸರ್ಕಾರದಿಂದ ಅನ್ಯಾಯ ಎಸಗಲಾಗಿದೆ. ಈಡಿಗ ಸಮಾಜವನ್ನ ಎಸ್‌ಸಿ- ಎಸ್‌ಟಿಗೆ ಸೇರಿಸಬೇಕು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಘೋಷಿಸಲು ಒತ್ತಾಯಿಸಿ ಜನವರಿ 6ರಿಂದ ಮಂಗಳೂರಿನಿAದ ಬೆಂಗಳೂರಿನವರೆಗೆ ಐತಿಹಾಸಿಕ ಪಾದಯಾತ್ರೆ ನಡೆಸಲಾಗುವುದು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
    ಬರ್ಗಿಯಲ್ಲಿ ಮಾತನಾಡಿದ ಅವರು, ಸರಕಾರದಿಂದ ಹಿಂದುಳಿದವರನ್ನ ಹತ್ತಿಕ್ಕಲಾಗುತ್ತಿದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್‌ಕುಮಾರ ಅವರು ಈಡಿಗ ಸಮಾಜವನ್ನು ಬಲಿ ಕೊಡುತ್ತಿದ್ದಾರೆ. ಬೆಳಗಾವಿ ಅಧಿವೇಶನಲ್ಲಿ ಈ ಇಬ್ಬರೂ ಸಚಿವರು ಈಡಿಗ ಸಮುದಾಯ ನಿಗಮ ಸ್ಥಾಪನೆ ಕುರಿತಾಗಿ ಧ್ವನಿ ಎತ್ತಬೇಕಿದೆ. ಈ ಬಗ್ಗೆ ಸಚಿವರುಗಳು ಮಾತನಾಡದೆ ಇದ್ದರೆ ತಕ್ಕ ಪಾಠ ಕಲಿಸಲಾಗುವುದು ಎಂದಿದ್ದಾರೆ.
    ಸಿಎಂ ಬಸವರಾಜ ಬೊಮ್ಮಾಯಿ ಅವರ ಕುತಂತ್ರದಿಂದ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಹಿಂದುಳಿದ ಸಮಾಜಕ್ಕೆ ಅನ್ಯಾಯ ಮಾಡಿರುವ ಸರಕಾರ ಯಾವುದಾದರು ಇದ್ದರೆ ಅದು ಬೊಮ್ಮಾಯಿ ಸರಕಾರ ಎಂದು ಸ್ವಾಮೀಜಿ ಕಿಡಿಕಾರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top