Slide
Slide
Slide
previous arrow
next arrow

ಕಾರ್ಕಳದಲ್ಲಿ ಮಕ್ಕಳ‌ ರಾಜ್ಯೋತ್ಸವ ಪ್ರಶಸ್ತಿ: ತುಳಸಿ ಹಾಗೂ ಶಮಾಳಿಗೆ ಪ್ರದಾನ

300x250 AD

ಶಿರಸಿ: ಕಾರ್ಕಳ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ‌ ಸಮೇಳನ‌ ಸಮಿತಿ ನೀಡುವ ರಾಜ್ಯ ಮಟ್ಟದ‌ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿರಸಿಯ ಯಕ್ಷಗಾನದ ಬಾಲ ಕಲಾವಿದೆ ತುಳಸಿ ಹೆಗಡೆ ಹಾಗೂ ಚಿತ್ರದುರ್ಗದ ಶಮಾ ಭಾಗವತ್ ಅವರಿಗೆ ಪ್ರದಾನ ಮಾಡಲಾಯಿತು.
ಮುಂಬಯಿ ಸಹಿತ ರಾಜ್ಯದ ಪ್ರತಿ‌ ಜಿಲ್ಲೆಗಳಿಂದ ತಲಾ‌ ಓರ್ವರ‌ನ್ನು ಸಮಿತಿಯೇ ನೇರ ಆಯ್ದ ೩೩ ಮಕ್ಕಳಿಗೆ‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅಜೆಕಾರಿ‌ನ ರಾಧಾ ನಾಯಕ ಸಭಾಂಗಣದಲ್ಲಿ ಪ್ರದಾನ ಸಮಾರಂಭ ಕನ್ನಡದ ಸೊಗಡಿನ ನಡೆಯಿತು.
ತುಳಸಿ ಹೆಗಡೆ ಉತ್ತರ ಕನ್ನಡದಿಂದ, ಮೂಲತಃ ಯಲ್ಲಾಪುರ ತಾಲೂಕಿನ ಶಮಾ ಭಾಗ್ವತ್ ಚಿತ್ರದುರ್ಗ ಜಿಲ್ಲೆಯಿಂದ ಪ್ರಶಸ್ತಿಗೆ ಭಾಜನರಾದರು.
ಈ ವೇಳೆ ಪ್ರಮುಖರಾದ ತಲ್ಲೂರಾಯ ಶಿವರಾಮ ಶೆಟ್ಟಿ, ಎಂ.ಕೆ.ವಿಜಯಕುಮಾರ, ವಂದನಾ‌ ರೈ, ಸಗಾಯ್ ಸೆಲ್ವಿ, ಸಂಯೋಜಕ ಡಾ. ಶೇಖರ‌ ಅಜೆಕಾರ್ ಇತರರು‌ ಪ್ರಶಸ್ತಿ ಪ್ರದಾನ ಮಾಡಿದರು.

300x250 AD
Share This
300x250 AD
300x250 AD
300x250 AD
Back to top