Slide
Slide
Slide
previous arrow
next arrow

ಬಿಜೆಪಿಗರು ಮತ್ತೊಬ್ಬ ಪರೇಶನಿಗಾಗಿ ಹುಡುಕುತ್ತಿದ್ದಾರೆ: ಖಾದರ್ ಎಚ್ಚರಿಕೆ

300x250 AD

ಕುಮಟಾ: ಬಿಪಿಎಲ್ ಕಾರ್ಡ್ ಕೊಡಲು ಅರ್ಹತೆಯಿಲ್ಲದ ಬಿಜೆಪಿ ಜನಪರ ಸರ್ಕಾರ ಎಂದು ಹೇಳಿಕೊಳ್ಳುತ್ತದೆ. ಬಿಜೆಪಿಯವರು ಮತ್ತೊಂದು ಪರೇಶ್ ಮೇಸ್ತಾನನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಸಹೋದರರನ್ನ ರಕ್ಷಿಸಿಕೊಳ್ಳುವಂತೆ ಜನರನ್ನ ಎಚ್ಚರಿಸಲು ಈ ಜನಜಾಗೃತಿ ಸಮಾವೇಶ ನಡೆಸುತ್ತಿದ್ದೇವೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪರೇಶ್ ಪ್ರಕರಣವನ್ನ ಮತ್ತೆ ಮರುತನಿಖೆಗೆ ಹಾಕುತ್ತಿರುವುದು ನ್ಯಾಯ ಕೊಡಿಸುವುದಕ್ಕಲ್ಲ; ಬದಲಿಗೆ ಪರೇಶ್ ಪ್ರಕರಣವನ್ನ ಚುನಾವಣೆಯವರೆಗೆ ಜೀವಂತವಾಗಿರಿಸಲು. ಯಾವ ಪರೇಶ್ ಮೇಸ್ತಾ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆಯೋ ಅದೇ ಪರೇಶ್ ಮೇಸ್ತಾ ಮೂಲಕ ದೇವರು ನಿಮ್ಮನ್ನು ಮತ್ತೆ ವಾಪಸ್ ಕಳುಹಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಓಟು ತೆಗೆದುಕೊಂಡ ಬಳಿಕ ಬಿಜೆಪಿ ಕಷ್ಟದಲ್ಲಿರುವ ಜನರ ಬಳಿ ಬಂದು ಸಮಸ್ಯೆ ಕೇಳಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ್ದ ವಿವಿಧ ಜನಪರ ಯೋಜನೆಗಳನ್ನ ಸ್ಥಗಿತಗೊಳಿಸಿದೆ. ಡಬಲ್ ಎಂಜಿನ್ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರದಲ್ಲಿ ಯಾವುದೇ ಎಂಜಿನ್ ಇಲ್ಲ. ಹಿಂದಿನ ಭಟ್ಕಳ ಶಾಸಕ ಚಿತ್ತರಂಜನ್ ಹತ್ಯೆಯಾಗಿ ಇಷ್ಟು ವರ್ಷ ಕಳೆದಿದೆ. ಅವರ ಹತ್ಯೆಗೆ ನ್ಯಾಯ ಕೊಡುವಲ್ಲಿ ಎಷ್ಟರಮಟ್ಟಿಗೆ ಪ್ರಯತ್ನಿದ್ದಾರೆ ಅನ್ನೋದನ್ನ ಇಲ್ಲಿನ ಸಂಸದರು ಹೇಳಲಿ. ಚಿತ್ತರಂಜನ್ ಕುಟುಂಬಕ್ಕೆ ನ್ಯಾಯ ಕೊಡಲಾಗದ ಬಿಜೆಪಿಗೆ ಬೇರೆಯವರಿಗೆ ನ್ಯಾಯ ಕೊಡಿಸುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಎಲ್ಲರನ್ನು ಒಂದಾಗಿಸಬೇಕು. ಎಲ್ಲ ಸಮುದಾಯದವರನ್ನು ಒಂದುಗೂಡಿಸದೇ ಸೌಹಾರ್ದ ಮೂಡಲು ಸಾಧ್ಯವಿಲ್ಲ. ಕೋಮುವಾದಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಬೆಂಬಲಿಸಿ ಎಂದು ಕರೆ ನೀಡಿದರು.
ಕೆಪಿಸಿಸಿ ಹಿಂದುಳಿದ ವಿಭಾಗಗಳ ಅಧ್ಯಕ್ಷ ಮಧು ಬಂಗಾರಪ್ಪ, ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವನ್ನ ಈ ಭಾಗದಲ್ಲಿ ಆಯೋಜಿಸಲಾಗಿದೆ. ಯಾರು ಸಾಯ್ತಾರೆ, ಅದನ್ನ ಹೇಗೆ ರಾಜಕೀಯವಾಗಿ ಬಳಸಿಕೊಳ್ಳಬಹುದು ಅನ್ನೋದನ್ನ ಬಿಜೆಪಿಯವರು ಹುಡುಕುತ್ತಿದ್ದಾರೆ. ಪರೇಶ್ ಮೇಸ್ತಾ ಪ್ರಕರಣವನ್ನ ಮುಂದಿರಿಸಿಕೊ0ಡು ಬಿಜೆಪಿ ಅನಧಿಕೃತವಾಗಿ ಅಧಿಕಾರಕ್ಕೆ ಬಂದಿದೆ. ಅದನ್ನು ಅಧಿಕಾರದಿಂದ ಇಳಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದರು. ಜನರಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮಗಳನ್ನ ತಂದಿರುವುದು ಕಾಂಗ್ರೆಸ್. ಆದರೆ ಜನರಿಗೆ ಚೂರಿ, ಕತ್ತಿ ಕೊಡುವಂತಹ ಕೆಲಸವನ್ನ ಬಿಜೆಪಿ ಮಾಡಿಕೊಂಡು ಬಂದಿದೆ. ಇದೀಗ ಚುನಾವಣೆ ಸಮೀಪಿಸುತ್ತಿರುವಾಗ ಇಲ್ಲಿನ ಸಂಸದರು ಮುಂದೆ ಬರ್ತಾರೆ. ಸಂವಿಧಾನವನ್ನೇ ಬದಲು ಮಾಡ್ತೀನಿ ಎಂದು ಹೇಳುತ್ತಾರೆ. ಜನರಲ್ಲಿ ಸೌಹಾರ್ದತೆ ಮೂಡಿಸಲು ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯAತಹ ನಾಯಕರು ನಮ್ಮ ದೇಶಕ್ಕೆ ಬೇಕಾಗಿದೆ. ಒಬ್ಬ ವ್ಯಕ್ತಿಯ ಸಾವಿನ ಮೇಲೆ ಕೀಳುಮಟ್ಟದ ರಾಜಕೀಯ ಬಿಜೆಪಿಯವರು ಮಾಡಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದೆಂದರೆ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು ಎಂದು ಕೇಳಿಕೊಂಡರು.
ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಮಾತನಾಡಿ, ಪರೇಶ್ ಮೇಸ್ತಾನ ಸಹಜ ಸಾವಾಗಿದ್ರೂ ಬಿಜೆಪಿಯವರು ಕೊಲೆ ಎಂದು ಬಿಂಬಿಸಿದರು. ವಿವಿಧ ಕಥೆಗಳನ್ನು ಕಟ್ಟಿ ಜನರ ಹಾದಿ ತಪ್ಪಿಸಿದರು. ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಸುನೀಲ್ ನಾಯ್ಕ್, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ವಿಶ್ವೆಶ್ವರ ಹೆಗಡೆ ಕಾಗೇರಿ ಪ್ರಚಾರ ಮಾಡಿದ್ದೇ ಮಾಡಿದ್ದು. ಸಿಬಿಐಗೆ ತನಿಖೆ ಮಾಡಲು ಕೊಡಬೇಕೆಂದು ಒತ್ತಾಯಿಸಿದ್ದರು. ಆದರೆ, ಕೊನೆಗೂ ಸಿಬಿಐನಿಂದ ಇದು ಸಹಜ ಸಾವೆಂದು ವರದಿ ಬಂದಿದೆ. ಬಿಜೆಪಿಯ ಕರಾವಳಿ ಶಾಸಕರು ಪರೇಶ್ ಮೇಸ್ತಾ ಸಾವಿನ ಫಲಾನುಭವಿಗಳು. ಅವನ ಸಾವನ್ನು ಮುಂದಿಟ್ಟು ಪ್ರಚಾರ ಮಾಡಿ ಶಾಸಕರಾಗಿರುವವರಿಗೆ ಈ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ, ಸಾವಿನಲ್ಲಿ ರಾಜಕಾರಣ ಮಾಡುವುದಕ್ಕೆ ನಾಚಿಗೆಯಾಗಬೇಕು. ಇದು ಸುಳ್ಳು ಹೇಳುವವರ ವಿರುದ್ಧ ಜನಜಾಗೃತಿ ಸಮಾವೇಶ. ಉತ್ತಮ ಆಡಳಿತಕ್ಕಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬರಬೇಕಿದೆ ಎಂದರು.
ಮಾಜಿ ಸಚಿವ ಮತ್ತು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಬಿಜೆಪಿ ನ್ಯಾಯದ ಮಾರ್ಗದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ಕೋಮು ಗಲಭೆ ಮಾಡಿ ಅಧಿಕಾರ ಹಿಡಿದಿದ್ದಾರೆ. ಬಡವರಿಗೆ ಒಂದೆ ಒಂದು ಯೋಜನೆ ನೀಡಿಲ್ಲ. ನಮ್ಮ ಸಿದ್ದರಾಮಯ್ಯನವರು ಅಭಿವೃದ್ಧಿ ಯುಗ ಶುರು ಮಾಡಿದ್ದರು. ಕಾಂಗ್ರೆಸ್ ಬಡವರ, ರೈತರ, ಕೂಲಿಕಾರರ ಪಕ್ಷವಾಗಿದೆ. ಜಾತಿಬೇಧ ಭಾವ ಇಲ್ಲ. ಎಲ್ಲರನ್ನು ಸಮಾನರಾಗಿ ಕಾಣುವ ಸಂಸ್ಕೃತಿ ನಮ್ಮದು. ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

300x250 AD
Share This
300x250 AD
300x250 AD
300x250 AD
Back to top