Slide
Slide
Slide
previous arrow
next arrow

ಕಾರ್ತೀಕ ಸೋಮವಾರದ ಭಜನಾ ಕಾರ್ಯಕ್ರಮ ಸಂಪನ್ನ

300x250 AD

ಶಿರಸಿ: ನಗರದ ಅಯ್ಯಪ್ಪ ದೇವಾಲಯದಲ್ಲಿ ಕಾರ್ತೀಕ ಸೋಮವಾರದಂದು ಪ್ರಜ್ವಲ ಟ್ರಸ್ಟ್ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶ್ರೀಮತಿ ಚೇತನಾ ಹೆಗಡೆ ಇವರ ಶಿಷ್ಯವೃಂದದವರು ಅತ್ಯಂತ ಭಕ್ತಿ ಪೂರ್ವಕ ಭಜನೆಗಳನ್ನು ಹಾಗೂ ಶಂಕರ ಸ್ತೋತ್ರಗಳನ್ನು ಹಾಡಿ ಸೇವೆ ಸಲ್ಲಿಸಿದರು. ನಂತರದಲ್ಲಿ ಸ್ನೇಹಾ ಉದಾಸಿ, ಶ್ರೀನಿಧಿ ಹೆಗಡೆ,ಬಿಂದು ಹೆಗಡೆ, ಸುಗಂಧಿ ಗುರುಪ್ರಸಾದ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಇಳಿಹೊತ್ತು 6 ಗಂಟೆಯಿಂದ ಪ್ರಾರಂಭವಾದ ಭಜನಾ ಕಾರ್ಯಕ್ರಮವು ಮಹಾ ಮಂಗಳಾರತಿಯವರೆಗೆ ಸರಿಸುಮಾರು 3 ಗಂಟೆಗಳವರೆಗೆ ನಿರಂತರವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತಬಲಾ ಸಾಥಿಯಾಗಿ ಸುಬ್ಬಣ್ಣ ಮಂಗ್ಳೂರ್, ಹಾರ್ಮೋನಿಯಂನಲ್ಲಿ ಕಮಲಾಕ್ಷಿ ಹೆಗಡೆ ಸಾಥ್ ನೀಡಿದರು.
ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

300x250 AD
Share This
300x250 AD
300x250 AD
300x250 AD
Back to top