Slide
Slide
Slide
previous arrow
next arrow

ಮಂಚಿಕೇರಿಯ ಮಹಾಗಜಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ: ಪ್ರಕರಣ ದಾಖಲು

300x250 AD

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಗ್ರಾಮದ ಮಹಾಗಜಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.

ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದ ಕಳ್ಳರು, ದೇವಸ್ಥಾನದ ಒಳಗಿದ್ದ ಕಾಣಿಕೆ ಹುಂಡಿಯನ್ನು ಒಡೆದು, ಹುಂಡಿಯಲ್ಲಿದ್ದ ಅಂದಾಜು ಮೂರು ಸಾವಿರ ರೂ. ಹಣ ಹಾಗೂ ದೇವಾಲಯದಲ್ಲಿ ಇದ್ದ 10 ಸಾವಿರ ರೂ ಮೌಲ್ಯದ ಎರಡು ದೊಡ್ಡದಾಗ ಹಿತ್ತಾಳೆಯ ಗಂಟೆಗಳು ಮತ್ತು 20 ಸಾವಿರ ರೂಪಾಯಿ ಮೌಲ್ಯದ ತಾಮ್ರದ ಕಡಾಯಿ, 10 ಸಾವಿರ ರೂಪಾಯಿ ಮೌಲ್ಯದ ಡಿ.ವಿ.ಆರ್.ಅನ್ನು ಕದ್ದೊಯ್ದಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top