ಶಿರಸಿ: ನಾಡಿನ ಪ್ರಸಿದ್ದ ತಬಲಾ ವಾದಕರು ಹಾಗೂ ಶ್ರೇಷ್ಠ ಗುರು ದಿವಂಗತ ಗಜಾನನ ಹೆಗಡೆ ಗಿಳಗುಂಡಿ ಇವರ ಮೊದಲನೆಯ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಸ್ವಗೃಹ ಮಂಜುಗುಣಿ ಸಮೀಪದ ಗಿಳಗುಂಡಿಯಲ್ಲಿ ಸ್ವರ ಸಂವೇದನಾ ಪ್ರತಿಷ್ಠಾನ(ರಿ) ಗಿಳಗುಂಡಿ ವತಿಯಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನ.05, ಶನಿವಾರದಂದು ಸಂಜೆ 4-30 ಗಂಟೆಯಿಂದ ಕಾರ್ಯಕ್ರಮವು ಆರಂಭಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಗಾಯನ ವಾದನಗಳು ಪ್ರಸ್ತುತಿಗೊಳ್ಳಲಿದೆ. ಪ್ರಸಿದ್ಧ ಕಲಾವಿದರುಗಳಾದ ಪಂ. ಎಂ. ಪಿ. ಹೆಗಡೆ ಪಡಿಗೇರೆ ಶಿರಸಿ, ಪಂ. ರಾಮದಾಸ ಫಲಸುಲೆ ಪುಣೆ, ಶ್ರೀಪಾದ ಹೆಗಡೆ ಸೋಮನಮನೆ, ಶ್ರೀಮತಿ ಬಕುಲಾ ಹೆಗಡೆ, ಭಾರವಿ ಧೇರಾಜೆ ಸುರತ್ಕಲ್ ಮುಂತಾದ ಕಲಾವಿದರುಗಳು ಭಾಗವಹಿಸಲಿದ್ದಾರೆ.
ಸುತ್ತಮುತ್ತಲಿನ ಸಂಗೀತ ಆಸಕ್ತರು ಹಾಗೂ ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಟ್ರಸ್ಟಿನ ಕಾರ್ಯದರ್ಶಿಗಳಾದ ಮಂಜುನಾಥ ಹೆಗಡೆ ಇವರು ವಿನಂತಿಸಿಕೊಂಡಿದ್ದಾರೆ.
ನ.5ರಂದು ಗಿಳಗುಂಡಿಯಲ್ಲಿ ಸಂಗೀತ ಕಾರ್ಯಕ್ರಮ
![](https://euttarakannada.in/wp-content/uploads/2022/11/20221103_185427-730x438.jpg?v=1667481713)