• Slide
    Slide
    Slide
    previous arrow
    next arrow
  • ಅ.31ಕ್ಕೆ ವಾಜಗದ್ದೆಯಲ್ಲಿ ‘ಯಕ್ಷ ಚತುರ್ಭುಜ’ ಯಕ್ಷಗಾನ

    300x250 AD

    ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ಯಕ್ಷಮಿತ್ರ ಬಳಗ ಇವರಿಂದ ದಿ.ಗಣಪತಿ ಭಟ್ಟ ಕಣ್ಣಿಮನೆ ನೆನಪಿನ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ತೆಂಕು-ಬಡಗಿನ ದಿಗ್ಗಜ ಯಕ್ಷಗಾನ ಕಲಾವಿದರಿಂದ ಅ.31ರಂದು ಸಂಜೆ 7ರಿಂದ ವಾಜಗದ್ದೆಯ ದುರ್ಗಾವಿನಾಯಕ ಸಭಾಭವನದಲ್ಲಿ ಯಕ್ಷಚತುರ್ಭುಜ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

    ರುಕ್ಮಾಂಗದ ಚರಿತ್ರೆ, ಕೃಷ್ಣಾರ್ಜುನ ಕಾಳಗ, ಚಂದ್ರಾವಳಿ ವಿಲಾಸ ಹಾಗೂ ರಾಜಾ ಯಯಾತಿ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು 55ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top