• Slide
    Slide
    Slide
    previous arrow
    next arrow
  • ಇಸ್ಪೀಟಾಡುತ್ತಿದ್ದ 14 ಮಂದಿ ಪೊಲೀಸರ ವಶಕ್ಕೆ

    300x250 AD

    ಶಿರಸಿ: ದೀಪಾವಳಿ ಹಬ್ಬದ ದಿನವೂ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿ 14 ಮಂದಿಯನ್ನ ವಶಕ್ಕೆ ಪಡೆದು, 64,200 ರೂ. ನಗದು ಜಪ್ತುಪಡಿಸಿಕೊಂಡಿದ್ದಾರೆ.
    ತಾಲೂಕಿನ ಕಸದ ಗುಡ್ಡೆ ಗ್ರಾಮದ ಅಂಗನವಾಡಿ ಶಾಲೆಯ ಪಕ್ಕದ ಆಕೇಶಿಯಾ ಪ್ಲಾಂಟೇಶನ್‌ನಲ್ಲಿ ಜೂಟಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪಿಎಸ್‌ಐ ಡಿ.ಎನ್.ಈರಯ್ಯ ನೇತೃತ್ವದ ತಂಡ ದಾಳಿ ನಡೆಸಿತ್ತು. ಸದ್ಯ ಸ್ಥಳದಲ್ಲಿ ಸಿಕ್ಕ 14 ಮಂದಿಯ ಮೇಲೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
    ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರದೀಪ್ ರೇವಣಕರ್, ಸಂತೋಷ್ ಕಮಟಗೇರಿ, ರಾಜೇಶ್ ನಾಯ್ಕ್, ರಾವಸಾಬ್ ಕಿತ್ತೂರು, ಸುನಿಲ್ ಹಡಲಗೆ, ಅರುಣಕುಮಾರ್ ನಾಯ್ಕ್, ಯಲ್ಲಪ್ಪ ಪೂಜಾರಿ, ಹನುಮಂತ ಮಾಕಪುರ, ರವಿ ಹೆಸರೂರು, ಮಾದೇವ ಪೂಜಾರಿ, ಚೇತನ್ ಹಾಗೂ ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top