Slide
Slide
Slide
previous arrow
next arrow

ಉಚಿತ ಹೃದಯರೋಗ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರ

300x250 AD

ಕಾರವಾರ: ಇಲ್ಲಿನ ಲಾಯನ್ಸ್ ಕ್ಲಬ್, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಸುರತ್ಕಲ್‌ನ ಶ್ರೀನಿವಾಸ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಸಹಯೋಗದೊಂದಿಗೆ ಉಚಿತ ಹೃದಯರೋಗ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರ ಅ.23ರಂದು ನಡೆಯಲಿದೆ ಎಂದು ಲಯನ್ಸ್ ಕ್ಲಬ್‌ನ ವಿನೋದ ನಾಯ್ಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ತನಕ ನಗರದ ಹಿಂದೂ ಹೈಸ್ಕೂಲ್ ಸಭಾಭವನದಲ್ಲಿ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಹೃದ್ರೋಗ ತಜ್ಞರಾದ ಡಾ.ಅಮಿತಕಿರಣ ನೇತೃತ್ವದಲ್ಲಿ ಡಾ.ಭಾವಿಶ ಶೆಟ್ಟಿ ಮತ್ತು ಡಾ.ಪ್ರಮುಖ ಹೆಗಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶಿಬಿರಾರ್ಥಿಗಳು ಅವರ ಹಳೆಯ ವೈದ್ಯಕೀಯ ದಾಖಲೆಗಳನ್ನು, ಇ.ಸಿ.ಜಿ. ಸ್ಕ್ಯಾನಿಂಗ್ ರಿಪೋರ್ಟ್ಗಳನ್ನು, ವೈದ್ಯರಿಂದ ಕೊಡಲ್ಪಟ್ಟ ಚೀಟಿಯನ್ನು ತಂದು ಶಿಬಿರದಲ್ಲಿ ನಮ್ಮ ಹೆಸರನ್ನು ನೋಂದಾಯಿಸಿ ವೈದ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.

300x250 AD

ಲಯನ್ಸ್ ಕ್ಲಬ್‌ನ ಇಬ್ರಾಹಿಂ ಕಲ್ಲೂರ್, ಅಲ್ತಾಫ್ ಶೇಖ್ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top