• Slide
    Slide
    Slide
    previous arrow
    next arrow
  • ಅಪರಿಚಿತ ವಾಹನ ಡಿಕ್ಕಿ; ಸೈಕಲ್ ಸವಾರನಿಗೆ ಗಾಯ

    300x250 AD

    ದಾಂಡೇಲಿ: ವಾಯುವಿಹಾರಕ್ಕೆಂದು ಸೈಕಲ್ ಮೇಲೆ ಹೋಗುತ್ತಿದ್ದ ವ್ಯಕ್ತಿಯೋರ್ವ ಅಪರಿಚಿತ ಕಾರೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ತಾಲೂಕಿನ ಅಂಬಿಕಾನಗರ- ದಾಂಡೇಲಿ ರಸ್ತೆಯಲ್ಲಿ ಬರುವ ಬಡಕಾನಶಿರಡಾದಲ್ಲಿ ನಡೆದಿದೆ.
    ನಗರದ ಓಲ್ಡ್ ಡಿ.ಆರ್.ಟಿ ನಿವಾಸಿಯಾಗಿರುವ ನಾಗರಾಜ ಲೋಗಾವಿ ಗಾಯಗೊಂಡ ವ್ಯಕ್ತಿ. ಇವರು ವಾಯುವಿಹಾರಕ್ಕೆಂದು ಸೈಕಲ್ ಮೇಲೆ ದಾಂಡೇಲಿಯಿಂದ ಬಡಕಾನಶಿರಡಾ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಅಪರಿಚಿತ ಕಾರೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ನಾಗರಾಜ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಸೈಕಲ್ ಸಂಪೂರ್ಣ ನಜ್ಜುಗುಜ್ಜಾಗಿದೆ.
    ನಾಗರಾಜ ಅವರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top