• Slide
    Slide
    Slide
    previous arrow
    next arrow
  • ಈರ್ವರ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ‌ ಪಾರು

    300x250 AD

    ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಎಸ್. ಕೆ. ಪಿ ಕ್ರೀಡಾಂಗಣದ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರಿಗೆ ಚಿರತೆಯೊಂದು ಗಾಯಗೊಳಿಸಿದ ಘಟನೆ ನಡೆದಿದೆ.

     ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹಾಡಗೇರಿ ನಿವಾಸಿಗಳಾದ ಈರ್ವರು, ಸಾಲ್ಕೋಡ್ ಭಾಗದಿಂದ ಅರೆಅಂಗಡಿಗೆ ದ್ವಿಚಕ್ರ ವಾಹನದಲ್ಲಿ ಸಾಗುವಾಗ  ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಮರ ಇರುವ ಪ್ರದೇಶದಿಂದ ನುಗ್ಗಿದ ಚಿರತೆಯೊಂದು ಏಕಾಏಕಿ ಬೈಕ್ ಮೇಲೆ ಎಗರಿದೆ. ಈ ಸಂದರ್ಭದಲ್ಲಿ ಈರ್ವರ ಕಾಲಿನ ಭಾಗಕ್ಕೆ ಉಗುರಿನಿಂದ ತಗುಲಿದ ಗಾಯ ಸಂಭವಿಸಿದ್ದು, ಅರೇಅಂಗಡಿಯಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಎರಡು ದಿನದ ಹಿಂದೆ ಇದೇ ಗ್ರಾಮದ ಬಾವಿಯಲ್ಲಿ ಚಿರತೆ ಬಿದ್ದಿದ್ದು, ಉರಗತಜ್ಞರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯವರು ಬೋನಿನಲ್ಲಿ ಚಿರತೆ ಸೆರೆಹಿಡಿದು ಬಿಟ್ಟಿದ್ದರು. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಾಗಲೇ ಮತ್ತೆ ಇಂತಹ ಘಟನೆ ಸಂಭವಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top