Slide
Slide
Slide
previous arrow
next arrow

ಇತಿಹಾಸದುದ್ದಕ್ಕೂ ಕಾಂಗ್ರೆಸ್ ಮಾಡಿದ್ದು ಭಾರತ್ ತೋಡೋ: ಸಚಿವ ಪೂಜಾರಿ

300x250 AD

ಭಟ್ಕಳ: ಕಾಂಗ್ರೆಸ್ ಈಗ ಮಾಡುತ್ತಿರುವ ಪಾದಯಾತ್ರೆಯನ್ನು ಭಾರತ ಜೋಡೋ ಎಂದು ಹೇಳುತ್ತಿದೆ. ಆದರೆ ಇತಿಹಾಸದುದ್ದಕ್ಕೂ ಕಾಂಗ್ರೆಸ್ ಭಾರತ್ ತೋಡೋವನ್ನೇ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿರುವ ಅವರು, ತಾಯಿಯ ಎದೆ ಹಾಲು ಕುಡಿದಿದ್ದರೆ ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಿಸಿ ಎಂದು ಆತಂಕವಾದಿಗಳು ಸವಾಲೆಸೆದರೆ ಆಗಿನ ಕಾಂಗ್ರೆಸ್ ಸರ್ಕಾರ ಅದಕ್ಕೆ ಪ್ರತ್ಯುತ್ತರ ಕೊಡದೆ ಅವರಿಗೆ ರಾಜ ಮರ್ಯಾದೆ ಕೊಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಕಾಶ್ಮೀರದಲ್ಲಿ ಪ್ರತಿ ಸರ್ಕಾರಿ ಕಟ್ಟಡದ ಮೇಲೂ ಭಾರತದ ಧ್ವಜ ಹಾರುವಂತೆ ಆಗಿದೆ. ಇದು ನಿಜವಾದ ಭಾರತ್ ಜೋಡೋ ಕಾರ್ಯಕ್ರಮವಾಗಿದೆ. ಕಾಂಗ್ರೆಸ್ ಸ್ವಾತಂತ್ರ್ಯದ ನಂತರ ಕಾಶ್ಮೀರದಲ್ಲಿ ಮಾಡಿದ್ದು ಭಾರತ್ ತೋಡೋ ಅಷ್ಟೇ ಎಂದರು.

300x250 AD
Share This
300x250 AD
300x250 AD
300x250 AD
Back to top