Slide
Slide
Slide
previous arrow
next arrow

ವಿದ್ಯಾಧೀಶ ತೀರ್ಥರ ದಿಗ್ವಿಜಯೋತ್ಸವ ಯಾತ್ರೆ ಸಂಪನ್ನ

300x250 AD

ಕುಮಟಾ: ಪಟ್ಟಣದ ಶ್ರೀ ಶಾಂತೇರಿ ಕಾಮಾಕ್ಷಿ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತವನ್ನು ಯಶಸ್ವಿಗೊಳಿಸಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮಿಗಳ ದಿಗ್ವಿಜಯೋತ್ಸವ ಯಾತ್ರೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಂಪನ್ನಗೊಂಡಿತು.

ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮಿಗಳು ಪಟ್ಟಣದ ರಥಬೀದಿಯಲ್ಲಿರುವ ಶ್ರೀ ಶಾಂತೇರಿ ಕಾಮಾಕ್ಷಿ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ನೂರು ದಿನಗಳ ಚಾತುರ್ಮಾಸ್ಯ ವೃತವನ್ನು ಪೂರ್ಣಗೊಳಿಸಿದ್ದಾರೆ. ಶ್ರೀಗಳ ಜಾತುರ್ಮಾಸ್ಯ ವೃತ ಯಶಸ್ವಿಯಾದ ಹಿನ್ನಲೆಯಲ್ಲಿ ಜಿಎಸ್‌ಬಿ ಸಮುದಾಯದವರು ಶ್ರೀಗಳ ದಿಗ್ವಿಜಯೋತ್ಸವವನ್ನು ಅದ್ಧೂರಿಯಾಗಿ ನಡೆಸಿದರು. ಶ್ರೀಗಳು ದೇವಸ್ಥಾನದ ಮಹಾದ್ವಾರಕ್ಕೆ ಆಗಮಿಸುತ್ತಿದ್ದಂತೆ ಗಜರಾಜನಿಂದ ಗಂಟೆ ಮತ್ತು ಚಾಮರದ ಸೇವೆಯೊಂದಿಗೆ ಸ್ವಾಗತ ಕೋರಲಾಯಿತು. ಬಳಿಕ ವೃಂದಾವನಸ್ಥ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಬಳಿಕ ಗಜರಾಜನಿಂದ ಶ್ರೀಗಳಿಗೆ ಮಾಲಾರ್ಪಣೆ ಮಾಡಲಾಯಿತು. ಪುಷ್ಪಾಲಂಕೃತ ರಥದಲ್ಲಿ ಶ್ರೀಗಳನ್ನು ವಿರಾಜಮಾನರಾಗಿಸಿದ ಭಕ್ತರು ವಿಜಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ದೇವಸ್ಥಾನದಿಂದ ಮೂರುಕಟ್ಟೆ ಕ್ರಾಸ್, ಬಸ್ತಿಪೇಟೆ ಕ್ರಾಸ್, ಮಾಸ್ತಿಕಟ್ಟೆ ಸರ್ಕಲ್, ಮಣಕಿ ಮೈದಾನ , ಗಿಬ್ ಸರ್ಕಲ್ ಮಾರ್ಗವಾಗಿ ಸುಭಾಸ್ ರೋಡ್ ಮೂಲಕ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿ, ಸಮಾವೇಶಗೊಂಡಿತು. ವಿವಿಧ ಕಲಾ ತಂಡಗಳು ಮತ್ತು ಸ್ತಬ್ದ ಚಿತ್ರಗಳ ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿತು.

300x250 AD

ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಕ್ತರ ಧಣಿವಾರಿಸಲು ಬಸ್ತಿಪೇಟೆ ಕ್ರಾಸ್, ಮಾಸ್ತಿಕಟ್ಟೆ, ಮಹಾಲಕ್ಷ್ಮಿ ಕಂಫರ್ಟ್ ಮತ್ತು ಬೆಣ್ಣೆ ಕಾಂಪ್ಲೆಕ್ಸ್ನಲ್ಲಿ ತಂಪು ಪಾನೀಯ ಸೇರಿದಂತೆ ಚಹಾ-ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಚಹಾ-ತಿಂಡಿ ಸೇವಿಸುವ ಮೂಲಕ ಭಕ್ತರು ಧಣಿವಾರಿಸಿಕೊಂಡರು. ಮಣಕಿ ಮೈದಾನದಲ್ಲಿ ಅರ್ಧ ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ಮತ್ತು ಲೇಸರ್ ಶೋ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಚಾತುರ್ಮಾಸ್ಯ ವೃತ ಸಮಿತಿಯ ಅಧ್ಯಕ್ಷ ಗೋಪಾಲ ವಾಮನ ಕಿಣಿ, ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನ ಅಧ್ಯಕ್ಷ ಶೇಷಗಿರಿ ಕೃಷ್ಣ ಶಾನಭಾಗ, ಚಾತುರ್ಮಾಸ್ಯ ವೃತ ಸಮಿತಿಯ ಪ್ರಮುಖರಾದ ಅನಂತ ಶಾನಭಾಗ, ಅರವಿಂದ ಗೋಳಿ, ಅಜೀತ್ ಭಟ್, ಭಗೀರಥ ಪೈ, ರಾಮಕೃಷ್ಣ ಗೋಳಿ, ತ್ರಿವಿಕ್ರಮ ಶಾನಭಾಗ, ಗಜಾನನ ಕಿಣಿ, ರಾಧಾಕೃಷ್ಣ ಪೈ ಸೇರಿದಂತೆ ಗಣ್ಯರು, ಜಿಎಸ್‌ಬಿ ಸಮಾಜ ಬಾಂಧವರು, ಇತರೆ ಸಮಾಜದ ಮುಖಂಡರು ಕೂಡ ಪಾಲ್ಗೊಳ್ಳುವ ಮೂಲಕ ಶ್ರೀಗಳ ದಿಗ್ವಿಜಯೋತ್ಸವವನ್ನು ಯಶಸ್ವಿಗೊಳಿಸಿದರು.

Share This
300x250 AD
300x250 AD
300x250 AD
Back to top