Slide
Slide
Slide
previous arrow
next arrow

ಶಿರಸಿ ಲಯನ್ಸ್ ಕ್ಲಬ್ ನಿಂದ ಸೇವಾ ಸಪ್ತಾಹ

300x250 AD

ಸಿದ್ದಾಪುರ:ಸೇವಾ ಸಪ್ತಾಹದ ನಿಮಿತ್ತ ಶಿರಸಿ ಲಯನ್ಸ್ ಕ್ಲಬ್ ಸದಸ್ಯರು ಸಿದ್ದಾಪುರದ ಶ್ರೀ ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಗೆ ಭೇಟಿಕೊಟ್ಟು ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವಿಶೇಷ ಶಾಲೆಯನ್ನು ನಡೆಸುತ್ತಿರುವ ಆಶಾಕಿರಣ ಟ್ರಸ್ಟ್ಗೆ ದೇಣಿಗೆಯನ್ನು ಲಯನ್ ವರ್ಷಾ ಪಟವರ್ಧನರು ನೀಡಿದರು. ರವಿ ಹೆಗಡೆ ಹೂವಿನಮನೆ, ಪದಾಧಿಕಾರಿಗಳು ಮತ್ತು ಸಿದ್ದಾಪುರದ ಲಯನ್ಸ್ ಕ್ಲಬ್ಬಿನ ಸದಸ್ಯರು, ಶಿರಸಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ್ ಮತ್ತು ಕಾರ್ಯದರ್ಶಿ ಎಂ.ಜೆ.ಎಫ್. ಲಯನ್ ರಮಾ ಪಟವರ್ಧನ್ ಉಪಸ್ಥಿತರಿದ್ದರು. ರೀಜನ್ ಛೇರ್‌ಪರ್ಸನ್ ಎಂ.ಜೆ.ಎಫ್. ಲಯನ್ ಜ್ಯೋತಿ ಭಟ್ಟರು ಶುಭಾಷಯ ಕೋರಿ ಮಾತನಾಡಿದರು

300x250 AD
Share This
300x250 AD
300x250 AD
300x250 AD
Back to top