• Slide
    Slide
    Slide
    previous arrow
    next arrow
  • ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ

    300x250 AD

    ಕಾರವಾರಮನನೊಂದ ಯುವತಿಯೊಬ್ಬಳು ನಗರದ ಕಾಳಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ತಾಲೂಕಿನ ದೇವಭಾಗದ 18ರ ಹರೆಯದ ಯುವತಿಯೊಬ್ಬಳು ಯಾವುದೋ ವಿಷಯಕ್ಕೆ ನೊಂದು ಕಾಳಿ ನದಿಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.

    ಯುವತಿ ನದಿಗೆ ಬಿದ್ದಿರುವುದನ್ನು ಕಾಳಿ ರಿವರ್ ಗಾರ್ಡನ್‌ನ ಲೈಫ್ ಗಾರ್ಡ್ಸ್ಗಳು ಕಂಡಿದ್ದು, ತಕ್ಷಣವೇ ಸಮೀಪದ ಬೋಟುಗಳಲ್ಲಿ ತೆರಳಿ ಯುವತಿಯನ್ನ ರಕ್ಷಿಸಿದ್ದಾರೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಮಾಹಿತಿ ಸಿಕ್ಕಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top