ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖೆ ಹಾಗೂ ಗ್ರಾಮೀಣ-2 ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ನಿಮಿತ್ತ ಮರ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿ೦ದ ಅ.12, ಬುಧವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.
ನಗರದ ಪಟ್ಟಣ ಶಾಖೆಯ ಯಲ್ಲಾಪುರ ರಸ್ತೆ, ಅಶ್ವಿನಿ ಸರ್ಕಲ್, ಹೊಸಪೇಟೆ ರಸ್ತೆ, ಲಯನ್ಸ ನಗರ, ಎ.ಪಿ.ಎಂ.ಸಿ, ಟಿ.ಎಸ್.ಎಸ್ ರಸ್ತೆ, ಬನವಾಸಿ ರಸ್ತೆ, ಹುಬ್ಬಳ್ಳಿ ರಸ್ತೆ, ನೆಹರೂನಗರ, ಡಾನ್ಬಸ್ಕೊ ಚರ್ಚ ರೋಡ್, ಮಾರಿಕಾಂಬಾನಗರ, ಇಂಡಸ್ಟ್ರಿಯಲ್ ಏರಿಯಾ, ರಾಮನಬೈಲ್, ಬಾಪೂಜಿನಗರ, ಪಟೇಲ್ಸಾಮಿಲ್, ಅಯ್ಯಪ್ಪನಗರ ಹಾಗೂ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ಮಾರಿಗದ್ದೆ, ಕೆಂಗ್ರೆ, ದೇವನಳ್ಳಿ, ಹಾಗೂ ಸಂಪಖಂಡ ಮಾರ್ಗಗಳಲ್ಲಿ ವಿದ್ಯುತ್ ಕಡಿತವಾಗುತ್ತದೆ.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.
ಅ.12 ರಂದು ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
