• Slide
    Slide
    Slide
    previous arrow
    next arrow
  • ಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿದ ದೂರದೃಷ್ಟಿ ಯೋಜನೆಗೆ ನಂದೋಳ್ಳಿ ಆಯ್ಕೆ

    300x250 AD

    ಯಲ್ಲಾಪುರ: ಯಲ್ಲಾಪುರ ಕ್ಷೇತ್ರದ  ನಂದೋಳ್ಳಿ ಹಾಗೂ ಬನವಾಸಿಯನ್ನು ಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿರುವ ದೂರದೃಷ್ಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶನಿವಾರ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಮನೆ ಮನೆ ಭೇಟಿ ನಡೆಸಿ ಯೋಜನೆಯ ಅನುಷ್ಠಾನದ ಕುರಿತು ಸಮೀಕ್ಷೆ ನಡೆಸಿದರು.

    ಕನ್ಸಲ್ಟನ್ಸ್ ಕೆ.ಎಸ್.ಡಿ.ಪಿ.ಡಿ.ಸಿ. ವೇಣುಗೋಪಾಲ ಈ ವೇಳೆ ಮಾತನಾಡಿ, ದೂರದೃಷ್ಟಿ ಯೋಜನೆ  ಜನರಿಂದಲೆ ಜನರಿಗಾಗಿ ಮಾಡುವ ಯೋಜನೆಯಾಗಿದ್ದು, ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಜನರಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

    300x250 AD

    ಗ್ರಾ ಪಂ ಅಧ್ಯಕ್ಷ ನರಸಿಂಹ ಕೋಣೆಮನೆ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಂಯೋಜಕ ಕೃಷ್ಣ ಭಟ್,  ಗ್ರಾ ಪಂ ಉಪಾಧ್ಯಕ್ಷೆ ಮೀನಾಕ್ಷಿ ಭಟ್ಟ, ಜಿಪಂ. ಸಿಪಿಓ ವಿನೋದ ಅಣವೇಕರ, ತಾಪಂ. ಇಒ ಜಗದೀಶ ಕಮ್ಮಾರ ನೋಡೆಲ್ ಅಧಿಕಾರಿ ದಾಕ್ಷಾಯಣಿ ನಾಯ್ಕ ,ಪಿಡಿಓ ಮಂಜುನಾಥ ಆಗೇರ, ಸಿಬ್ಬಂದಿ ಗಣಪತಿ ಹೆಗಡೆ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top