Slide
Slide
Slide
previous arrow
next arrow

ಸಿಬಿಐ ‘ಬಿ’ ರಿಪೋರ್ಟ್ ಕುರಿತು ಅಸಮಾಧಾನವಿದೆ; ಮೃತ ಪರೇಶ ಮೇಸ್ತ ತಂದೆ ಹೇಳಿಕೆ

300x250 AD

ಕಾರವಾರ: ನನ್ನ ಮಗನ ಸಾವಿನ ಬಗ್ಗೆ ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೆಸ್ತಾ ತಿಳಿಸಿದ್ದಾರೆ.

ಸಿಬಿಐನವರು ನನ್ನ ಮಗನ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಸಲು ನನಗೆ ಕುಮಟಾದ ಐಬಿಗೆ ಕರೆಸಿ ಮಾಹಿತಿ ನೀಡಿದ್ದು, ತಮ್ಮ ವರದಿಗೆ ನನಗೆ ಸಹಿ ಹಾಕಲು ತಿಳಿಸಿದಾಗ ನಾನು ಒಪ್ಪಲಿಲ್ಲ. ಅದಕ್ಕಾಗಿ ನನ್ನ ಮನೆಗೆ ಪೋಸ್ಟ್ ಮೂಲಕ ವರದಿಯನ್ನು ಕಳುಹಿಸಿದ್ದಾರೆ ಎಂದಿದ್ದಾರೆ.

300x250 AD

ನನಗೆ ಪೊಲೀಸರ ತನಿಖೆ ಮೇಲೂ ಅಸಮಾಧಾನವಿತ್ತು. ಈಗ ಸಿಬಿಐ ನೀಡಿದ ವರದಿ ಸಹ ಅಸಮಾಧಾನ ತಂದಿದೆ. ಸಿಬಿಐನವರು ಕಳಿಸಿದ ವರದಿಯನ್ನು ಇನ್ನೂ ತೆರೆಯದೇ ಹಾಗೇ ಇಟ್ಟಿದ್ದು, ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಲ್ಲರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

Share This
300x250 AD
300x250 AD
300x250 AD
Back to top