Slide
Slide
Slide
previous arrow
next arrow

ಅ.2ರಂದು ಶ್ರೀಕೃಷ್ಣ ಸಂಧಾನ ತಾಳಮದ್ದಳೆ

300x250 AD

ಶಿರಸಿ: ಸೇವಾ ರತ್ನ ಮಾಹಿತಿ ಕೇಂದ್ರ ಕಾನಸೂರಿನ 23ನೇ ವರ್ಷದ ಯಕ್ಷಪಂಚಕ ಪ್ರಯುಕ್ತ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ ಅ.2ರಂದು ಸಂಜೆ 4ಗಂಟೆಗೆ ಕಾನಸೂರು ಸಮಿಪದ ಕೊಡ್ಸರ ಗದ್ದೆಮನೆಯಲ್ಲಿ ನಡೆಯಲಿದೆ ಎಂದು ಸೇವಾ ರತ್ನ ಮಾಹಿತಿ ಕೇಂದ್ರದ ಸಂಚಾಲಕ ರತ್ನಾಕರ ಭಟ್ ಕಾನಸೂರು ತಿಳಿಸಿದ್ದಾರೆ.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕೃಷ್ಣ ಹೆಗಡೆ ಗದ್ದೆಮನೆ ವಹಿಸಲಿದ್ದಾರೆ.ಕೊಂಕಣ ಕಲಾ ಮಂಡಳ ಅಧ್ಯಕ್ಷ ವಾಸುದೇವ ಶಾನಭಾಗ ಅವರನ್ನು ಪುರಸ್ಕರಿಸಲಾಗುವುದು.ಕೃಷ್ಣ ಪದಕಿ ಸನ್ಮಾನಿತರ ಪರಿಚಯ ಮಾಡಲಿದ್ದಾರೆ.ನಂತರ ಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ  ಗಣಪತಿ ಭಟ್ ಭಾಗವತಿಕೆ ,ಶ್ರೀಪತಿ ಹೆಗಡೆ ಕಂಚಿಮನೆ ಮೃದಂಗ, ಅರ್ಥಧಾರಿಗಳಾಗಿ ಗಣಪತಿ ಭಟ್ ವರ್ಗಾಸರ, ಸುಬ್ರಾಯ ಹೆಗಡೆ ಕೆರೆಕೊಪ್ಪ, ಶ್ರೀನಿವಾಸ ಮತ್ತಿಘಟ್ಟಾ, ರಾಮಚಂದ್ರ ಭಟ್ ಶಿರಳಗಿ, ರತ್ನಾಕರ ಭಟ್ ಕಾನಸೂರು ಹಾಗೂ ಚಂದ್ರಶೇಖರ ಹೆಗಡೆ ಮಾದ್ನಕಳ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top