Slide
Slide
Slide
previous arrow
next arrow

ಅ.1ಕ್ಕೆ ಜಿಲ್ಲಾಮಟ್ಟದ ಕ್ರೀಡಾಕೂಟ

300x250 AD

ಯಲ್ಲಾಪುರ: ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ಅ.1ರಂದು  ಬೆಳಿಗ್ಗೆ 9.30 ಕ್ಕೆ ತಾಲೂಕಾ ಕ್ರೀಡಾಂಗಣ ಕಾಳಮ್ಮನಗರದಲ್ಲಿ ನಡೆಯಲಿದೆ ಎಂದು ಬಿಇಒ ಎನ್.ಆರ್.ಹೆಗಡೆ ಹೇಳಿದರು.

ಅವರು ಗುರುವಾರ ಈಕುರಿತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡುತ್ತಿದ್ದರು. ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಸಂಸದರು, ಜಿಲ್ಲೆಯ ಅಧಿಕಾರಿಗಳನ್ನು ಆಮಂತ್ರಿಸಲಾಗಿದೆ.ಕ್ರೀಡಾಕೂಟದಲ್ಲಿ 1200 ಕ್ರೀಡಾಪಟುಗಳು,ಸುಮಾರು 250 ನಿರ್ಣಾಯಕರು, ಶಿಕ್ಷಕರು ಪಾಲಕರು ಭಾಗವಹಿಸಲಿದ್ದಾರೆ.ಕ್ರೀಡಾಕೂಟದ ಯಶಸ್ಸಿಗೆ ಸ್ವಾಗತ ಸಮೀತಿ,ಹಣಕಾಸು,ಊಟೋಪಚಾರ ಸೇರಿದಂತೆ ಸುಮಾರು 10 ರಷ್ಟು ವಿವಿಧ ಸಮಿತಿಗಳನ್ನು ಮಾಡಿ ಜವಾಬ್ದಾರಿ ನೀಡಲಾಗಿದೆ.ಸ್ಪರ್ಧಾಳುಗಳಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಸಂತ ಬಂಡಾರಿ ಮಾತನಾಡಿ, ಒಳಾಂಗಣ ಆಟಗಳು ಮುಕ್ತಾಯವಾಗಿದ್ದು,ವಿವಿಧ ಅಥ್ಲೆಟಿಕ್ಸ್ ಹಾಗೂ ನಾಲ್ಕು ಗುಂಪು ಸ್ಪರ್ಧೆಗಳು ನಡೆಯಲಿದೆ ಎಂದರು.

300x250 AD

ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ,ತಾಲೂಕಾ ಅಧ್ಯಕ್ಷ ಆರ್.ಆರ್.ಭಟ್ಟ,ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಆರ್.ನಾಯಕ,ನೌಕರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ,ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ,ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top