Slide
Slide
Slide
previous arrow
next arrow

ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ನೀಡಿದ ವೀರೇಂದ್ರ ಹೆಗ್ಗಡೆ

300x250 AD

ಹೊನ್ನಾವರ: ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದ ನಾಮಧಾರಿ ಅಭಿವೃದ್ಧಿ ಸಂಘದಿಂದ ಬೆಟ್ಕುಳಿಯಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡಕ್ಕೆ ಶ್ರೀಕ್ಷೇತ್ರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ರೂ.10 ಲಕ್ಷಗಳ ಡಿಡಿ ನೀಡಿದರು.
ಶ್ರೀಕ್ಷೇತ್ರದ ಸಹಾಯ ಕೋರಿ ಸಾಮಾಜಿಕ ಮುಖಂಡ ಚಂದ್ರಶೇಖರ ಗೌಡ ಮಂಕಿ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಕ್ಷೇತ್ರ, ಬೆಟ್ಕುಳಿಯ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಣ್ಣ ನಾಯ್ಕ ಅವರಿಗೆ ಡಿಡಿ ಹಸ್ತಾಂತರಿಸಿ ಶುಭ ಕೋರಿದೆ. ಸಮುದಾಯ ಭವನ ಆದಷ್ಟು ಬೇಗ ಸುಸಜ್ಜಿತವಾಗಿ ಪೂರ್ಣಗೊಂಡು ಜನೋಪಯೋಗಿ ಕಾರ್ಯಕ್ಕೆ ತೆರೆದುಕೊಳ್ಳಲಿ ಎಂದು ಧರ್ಮಾಧಿಕಾರಿ ಹೆಗ್ಗೆಡೆಯವರು ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರಶೇಖರ ಗೌಡ ಮಂಕಿ ಹಾಗೂ ಬೆಟ್ಕುಳಿ ನಾಮಧಾರಿ ಸಂಘದ ಉಪಾಧ್ಯಕ್ಷ ತುಕಾರಾಮ ನಾಯ್ಕ, ಸದಸ್ಯರಾದ ಮಂಜುನಾಥ ನಾಯ್ಕ ಹಾಗೂ ಮಂಜುನಾಥ ಜಿ.ನಾಯ್ಕ ಇದ್ದರು.

300x250 AD
Share This
300x250 AD
300x250 AD
300x250 AD
Back to top