• Slide
    Slide
    Slide
    previous arrow
    next arrow
  • ಪ್ರಾಥಮಿಕ ಶಿಕ್ಷಣದಲ್ಲಿಯೇ ಯಕ್ಷಗಾನ ಅಳವಡಿಸಿದರೆ ಮಕ್ಕಳಿಗೆ ಆಸಕ್ತಿ ಹುಟ್ಟಲು ಸಾಧ್ಯ: ರವೀಂದ್ರ ಹಿರೇಕೈ

    300x250 AD

    ಸಿದ್ದಾಪುರ: ಯಕ್ಷಗಾನವನ್ನು ಪ್ರಾಥಮಿಕ ಶಿಕ್ಷಣದಲ್ಲಿಯೇ ಅಳವಡಿಸಿದರೆ ಮಕ್ಕಳು ಯಕ್ಷಗಾನ ಕಲೆಯತ್ತ ಬರುವುದಕ್ಕೆ ಹೆಚ್ಚು ಪೂರಕ ವಾತಾವರಣ ನೀಡಿದಂತಾಗುತ್ತದೆ. ಹಿರಿಯ ಕಲಾವಿದರು ಹಾಗೂ ಸಂಘಟಕರು ಯಕ್ಷಗಾನ ತರಬೇತಿ ನಡೆಸುವುದಕ್ಕೆ ಮುಂದಾಗಬೇಕೆಂದು ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.
    ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶಿರಸಿಯ ನಾದಶಂಕರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕುಶ-ಲವ ಯಕ್ಷಗಾನ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.
    ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಎಸ್.ಎಂ.ಹೆಗಡೆ ಪೆಟೇಸರ ಅಧ್ಯಕ್ಷತೆವಹಿಸಿದ್ದರು.ಯಕ್ಷಗಾನ ಪೋಷಕ ಗೋಪಾಲ ಹೆಗಡೆ ವಾಜಗದ್ದೆ, ಉದ್ಯಮಿ ಉಪೇಂದ್ರ ಪೈ ಶಿರಸಿ, ಎಂ.ಎನ್.ಹೆಗಡೆ ಸಾಗರ, ಅಶೋಕ ಹೆಗಡೆ ಹಿರೇಕೈ,ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ಶಂಕರ ಭಾಗವತ್ ಯಲ್ಲಾಪುರ ಉಪಸ್ಥಿತರಿದ್ದರು.
    ಸುಜಾತಾ ಹೆಗಡೆ ದಂಟಕಲ್, ರಘುಪತಿ ಹೆಗಡೆ ಹೂಡೇಹದ್ದ, ಶ್ರೀಪಾದ ಹೆಗಡೆ ಕಲ್ಮನೆ ಕಾರ್ಯಕ್ರಮ ನಿರ್ವಹಿಸಿದರು.
    ನಂತರ ಪ್ರದರ್ಶನಗೊಂಡ ಕುಶ-ಲವ ಯಕ್ಷಗಾನದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್,ಶAಕರ ಭಾಗವತ ಯಲ್ಲಾಪುರ, ಶರತ್ ಹೆಗಡೆ ಜಾನಕೈ, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಸಹಕರಿಸಿದರು.
    ರಾಮಚಂದ್ರ ಹೆಗಡೆ ಕೊಂಡದಕುಳಿ,ಶ್ರೀಧರ ಹೆಗಡೆ ಚಪ್ಪರಮನೆ, ವಿನಯ ಬೇರೊಳ್ಳಿ, ನಿತಿನ್ ದಂಟಕಲ್, ಪ್ರವೀಣ ತಟ್ಟೀಸರ, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ ಪಾತ್ರ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top