• Slide
    Slide
    Slide
    previous arrow
    next arrow
  • ಮಟಕಾ ಆಡಿಸುತ್ತಿದ್ದ ಓರ್ವನ ಬಂಧನ: ಪ್ರಕರಣ ದಾಖಲು

    300x250 AD

    ಅಂಕೋಲಾ: ಅವರ್ಸಾ ಮೀನು ಮಾರುಕಟ್ಟೆಯ ಬಳಿ ಕಾನೂನು ಬಾಹಿರವಾಗಿ ಮಟಕಾ ಆಡಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಓರ್ವನನ್ನು ವಶಕ್ಕೆ ಪಡೆದು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅವರ್ಸಾ ಸಕಲಬೇಣ ನಿವಾಸಿ ಚಂದ್ರಶೇಖರ ನಾಯ್ಕ ವಶದಲ್ಲಿರುವಾತ. ಈತನಿಂದ 680 ರೂಪಾಯಿ ನಗದು ಹಾಗೂ ಮಟಕಾ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಅವರ್ಸಾ ಗ್ರಾಮ ಪಂಚಾಯತಿ ಸದಸ್ಯ ರಾಜೇಶ ನಾಯ್ಕ ಎಂಬುವವರ ಮೇಲೂ ಸಹ ಪ್ರಕರಣ ದಾಖಲಾಗಿದ್ದು, ಆತ ತಲೆತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

    300x250 AD

    ಈ ಕಾರ್ಯಾಚರಣೆ ಸಿಪಿಐ ಸಂತೋಶ್ ಶೇಟ್ಟಿ ನೇತೃತ್ವದಲ್ಲಿ ಪಿಎಸೈ ಮಾಲಿನಿ ಹಂಸಬಾವಿ, ಸಿಬ್ಬಂದಿ ಪ್ರವೀಣಕುಮಾರ ಕೊಪ್ಪಳ ಒಳಗೊಂಡು ನಡೆದಿತ್ತು.

    Share This
    300x250 AD
    300x250 AD
    300x250 AD
    Leaderboard Ad
    Back to top