Slide
Slide
Slide
previous arrow
next arrow

ಅಜಿತ ಮನೋಚೇತನದಲ್ಲಿ ಸೇವಾ ಶಿಬಿರ

300x250 AD

ಶಿರಸಿ : ನಗರದ ಮರಾಠಿಕೊಪ್ಪದ ಅಜಿತ ಮನೋಚೇತನ ಸಂಸ್ಥೆಯ ಆವರಣದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸೌಲಭ್ಯ ನೀಡಿಕೆ ಸೇವಾ ಶಿಬಿರವನ್ನು ಸೆ.14, ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ವಿಶೇಷ ಚೇತನ ಮಕ್ಕಳು ಮತ್ತು ಪಾಲಕರು, ಹಾಗೂ ಬಡ
ಜನತೆಗೆ ಆರೋಗ್ಯ ಕಾರ್ಡ್ ನೀಡಿಕೆ ,ಯುಡಿಐಡಿ ಕಾರ್ಡ್,ಅಂಗವಿಕಲರ ಮಾಶಾಸನ, ವೃದ್ಧಾಪ್ಯ ವೇತನ ಇತ್ಯಾದಿ ಸೌಲಭ್ಯ ನೀಡಿಕೆ ಇವು ಸೇವಾ ಕಾರ್ಯಚಟುವಟಿಕೆಗಳು ಶಿಬಿರದಲ್ಲಿ ನಡೆಯಲಿದೆ.
ಸರ್ಕಾರದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಗ್ರಾಮ್ ವನ್‌ ಯೋಜನೆ ಸಿಬ್ಬಂದಿ, ಜಿಲ್ಲಾ ಆಡಳಿತ, ನಗರ ಸಭೆ, ಅಜಿತ ಮನೋಚೇತನ ಹಾಗೂ ಇನ್ನಿತರ ಸಮಾಜ ಸೇವಾ ಸಂಸ್ಥೆಗಳ ಗಣ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆೆ.
ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top