Slide
Slide
Slide
previous arrow
next arrow

ಬೀಳಲು ಸಜ್ಜಾಗಿ ನಿಂತ ವಿದ್ಯುತ್ ಕಂಬ: ಬದಲಾಯಿಸಲು ಸಾರ್ವಜನಿಕರ ಆಗ್ರಹ

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಿಡ್ ಹತ್ತಿರ ಕರೆಂಟ್ ಕಂಬವೊಂದು ರಸ್ತೆಗೆ ಬೀಳುವಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಉಮ್ಮಚಗಿಯಿಂದ ಹುಲ್ಲೋರಮನೆ,ಹುಣಸೆಮನೆ,ಕನೇನಳ್ಳಿ, ಬಾಳೆಗದ್ದೆ, ತೋಟದಕಲ್ಲಳ್ಳಿ,ಭರತನಹಳ್ಳಿ, ಚಿಪಗೇರಿ ಮುಂತಾದ ಊರುಗಳಿಗೆ ಹೋಗುವ ಜನರು ಅದೇ ಮಾರ್ಗವಾಗಿ ಹೋಗುವುದರಿಂದ ಕಂಬ ಯಾವುದೇ ಕ್ಷಣದಲ್ಲಿ ಬಿದ್ದು ಅಪಾಯ ಉಂಟಾಗುವ ಸಾಧ್ಯತಯಿದೆ. 

300x250 AD

ಪ್ರಮುಖವಾಗಿ ಶಾಲಾಮಕ್ಕಳು ದಿನವೂ ಅದೇ ರಸ್ತೆಯಲ್ಲಿ ಓಡಾಡ ಬೇಕಾಗಿರುವುದರಿಂದ ಪೋಷಕರು ಆತಂಕ ಪಡುವಂತಾಗಿದೆ. ಹಾಗಾಗಿ ಹೆಸ್ಕಾಂ ಅಧಿಕಾರಿಗಳು ತಕ್ಷಣ ವಾಲಿನಿಂತ ಕರೆಂಟ್ ಕಂಬವನ್ನು ಬದಲಾಯಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top