Slide
Slide
Slide
previous arrow
next arrow

ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಸಂದೀಪನ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರ

300x250 AD

ಕುಮಟಾ :ತಾಲೂಕಿನ ಹನೇಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಡಿಮೆ ಗ್ರಾಮದ ನಿವಾಸಿಯಾಗಿದ್ದ ಸಂದೀಪ್ ಆಗೇರ ಎನ್ನುವ ವ್ಯಕ್ತಿ ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಸೇತುವೆಯೊಂದರ ಮೇಲೆ ತೆರಳುತ್ತಿದ್ದಾಗ ಪ್ರವಾಹದ ನೀರಿಗೆ ಸಿಲುಕಿ ಲಾರಿ ಸಮೇತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು. ಬಡ ಕೂಲಿಕಾರ್ಮಿಕನಾಗಿದ್ದ ಸಂದೀಪ್ ಆಗೇರನನ್ನು ಕಳೆದುಕೊಂಡಿದ್ದ ಮಡದಿ ಆಶಾ ಆಗೇರ ಹಾಗೂ ಇಬ್ಬರು ಚಿಕ್ಕ ಮಕ್ಕಳ ಜೀವನ ದುಸ್ಥರವಾಗಿತ್ತು.

ಶಾಸಕ ದಿನಕರ ಶೆಟ್ಟಿಯವರು ಸಂದೀಪ್ ಆಗೇರನ ಮನೆಗೆತೆರಳಿ ಸಾಂತ್ವನ ಹೇಳುವುದರ ಜೊತೆಗೆ, ಆತನ ಕುಟುಂಬಕ್ಕೆ ಪ್ರಕೃತಿ ವಿಕೋಪದಿಂದ ಮಾನವನ ಪ್ರಾಣಹಾನಿಯಾದುದರ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರದ ಧನವಾಗಿ 5,00,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಕುಮಟಾ  ಬಿಜೆಪಿ ಪ್ರಧಾನ ಕಾರ್ಯದರ್ಶಿ  ವಿನಾಯಕ ನಾಯ್ಕ, ಹನೇಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ   ಭಾರತಿ ಗೌಡ , ಉಪಾಧ್ಯಕ್ಷ   ಭರತ್ ಗಾಂವಕರ , ತಾ. ಪಂ. ಮಾಜಿ ಸದಸ್ಯ  ಮಹೇಶ ಶೆಟ್ಟಿ, ಮಹಾಶಕ್ತಿಕೇಂದ್ರದ ಅಧ್ಯಕ್ಷ  ಚಂದ್ರಶೇಖರ ನಾಯ್ಕ್, ಗೋಕರ್ಣ ಸಿ. ಪಿ. ಐ. ವಸಂತ ಆಚಾರಿ ಜೊತೆಗಿದ್ದರು.

Share This
300x250 AD
300x250 AD
300x250 AD
Back to top