Slide
Slide
Slide
previous arrow
next arrow

ಬನವಾಸಿಯಲ್ಲಿ ಈರ್ವರ ಮೇಲೆ ಹಲ್ಲೆ

300x250 AD

ಬನವಾಸಿ: ವಿವಾಹವಾಗಿರುವ ಮಹಿಳೆಯನ್ನು ಪ್ರೀತಿಸುತ್ತಿರುವ ಬಗ್ಗೆ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಈರ್ವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬನವಾಸಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಇಲ್ಲಿನ ಅಜಾದ್ ನಗರ ನಿವಾಸಿ ಮನ್ಸೂರ್ ಅಬ್ದುಲ್ ಕರೀಂ ಶೇಕ್ ಹಲ್ಲೆ ನಡೆಸಿದವನಾಗಿದ್ದಾನೆ. ವಿವಾಹಿತೆಯ ಸಹೋದರರಾದ ನದೀಂ ಮತ್ತು ಇಬ್ರಾಹಿಂ ಗಾಯಗೊಂಡಿದ್ದಾರೆ. ವಿವಾಹ ಆದ ಬಳಿಕವೂ ಮನ್ಸೂರ್ ಆಕೆಯೊಂದಿಗೆ ಪ್ರೀತಿ ಹೊಂದಿದ್ದ. ಈ ವಿಷಯಕ್ಕೆ ಸಂಬಂಧಿಸಿ ಹಲವು ಬಾರಿ ಮಾತು ಸಹ ಬೆಳೆದಿತ್ತು.

300x250 AD

ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ಸಲುವಾಗಿ ಬನವಾಸಿಯ ಅಹ್ಲೆ ಸುನ್ನತ್ ಜಮಾತ್ ಕಾರ್ಯದರ್ಶಿ ಅಷ್ಪಾಕ್ ಅಲಿ ಅವರ ಮನೆಯಲ್ಲಿ ಶುಕ್ರವಾರ ಸಭೆ ನಡೆಸಲಾಗಿತ್ತು. ಈ ವೇಳೆ ಸೇರಿದ್ದ ಜಮಾತಿನ ಮುಂದೆಯೇ ನದೀಂ ಮತ್ತು ಮನ್ಸೂರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮನ್ಸೂರ್ ನು ಇಬ್ರಾಹಿಂ ಮತ್ತು ನದೀಂ ಗೆ  ಹಲ್ಲೆ ನಡೆಸಿದ್ದಾನಲ್ಲದೇ ಕೊಲೆ ಮಾಡುವ ಉದ್ದೇಶದೊಂದಿಗೆ ಚಾಕುವಿನಿಂದ ಕೈ, ಭುಜ ಸೇರಿದಂತೆ ಹಲವಾರು ಬಾರಿ ಚುಚ್ಚಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top