• Slide
    Slide
    Slide
    previous arrow
    next arrow
  • ಗಮನ ಸೆಳೆದ ನಾರಾಯಣ ಗುರುಗಳ ರಂಗೋಲಿ ಚಿತ್ರ

    300x250 AD

    ಅಂಕೋಲಾ: ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವದ ನಿಮಿತ್ತ ಹಮ್ಮಿಕೊಂಡ ಶ್ರೀನಾರಾಯಣ ಗುರುಗಳ ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಷ್ಣು ಗೌಡ ಅಂಬಾರಕೊಡ್ಲ ಪ್ರಥಮ ಸ್ಥಾನ ಪಡೆದರೆ, ವಿಘ್ನೇಶ್ವರ ನಾಯ್ಕ ಶಿರಕುಳಿ ದ್ವಿತೀಯ, ಮಯೂರ ಆಗೇರ ತೃತೀಯ ಬಹುಮಾನ ಪಡೆದರು.
    ಬಹುಮಾನ ವಿಜೇತರಿಗೆ ನಾಮಧಾರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ಎಸ್.ನಾಯ್ಕ ಬಹುಮಾನ ವಿತರಿಸಿ ಮಾತನಾಡಿ, ಶ್ರೀನಾರಾಯಣ ಗುರುಗಳ ಭಾವಚಿತ್ರವನ್ನು ಚಿತ್ರಿಸಿದ ತಮಗೆ ರಾಜ್ಯ- ರಾಷ್ಟ್ರ ಮಟ್ಟದಲ್ಲಿಯೂ ಗೌರವ ತಂದುಕೊಡಲಿ ಎಂದರು.
    ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮೋಹನ ಎಚ್.ನಾಯ್ಕ, ವ್ಯವಸ್ಥಾಪಕ ರಾಜೇಶ ನಾಯ್ಕ, ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಕಾರ್ಯದರ್ಶಿ ನಾಗೇಶ ನಾಯ್ಕ, ಪ್ರಮುಖರಾದ ಎನ್.ಪಿ.ನಾಯ್ಕ ಇತರರಿದ್ದರು. ಶಿಕ್ಷಕರಾದ ಪ್ರಶಾಂತ ನಾಯ್ಕ, ರಾಘವೇಂದ್ರ ಮಹಾಲೆ ನಿರ್ಣಾಯಕರಾಗಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top