Slide
Slide
Slide
previous arrow
next arrow

ಉರಗಪ್ರೇಮಿ ರಾಘವೇಂದ್ರ ನಾಯಕ ವಿಧಿವಶ

300x250 AD

ದಾಂಡೇಲಿ: ನಗರ ಹಾಗೂ ನಗರದ ಸುತ್ತಮುತ್ತಲು ಎಲ್ಲಿ ಹಾವು ಬಂದರೂ, ಮಾಹಿತಿ ದೊರೆತ ತಕ್ಷಣವೆ ಓಡೋಡಿ ಬರುತ್ತಿದ್ದ ನಗರದ ಉರಗಪ್ರೇಮಿ ರಾಘವೇಂದ್ರ ವಿ.ನಾಯಕ ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾದರು. ಮೃತರಿಗೆ 40 ವರ್ಷ ವಯಸ್ಸಾಗಿತ್ತು.

ಹಳೆದಾಂಡೇಲಿಯ ಅರಣ್ಯ ಡಿಪೋ ಹತ್ತಿರ ನಿವಾಸಿಯಾಗಿದ್ದ ರಾಘವೇಂದ್ರ.ವಿ.ನಾಯಕ ಅವರು ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಹೆಸ್ಕಾಂನಲ್ಲಿ ವಾಹನ ಚಾಲಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಮೃತರು ಮೂವರು ಸಹೋದರರು, ಪತ್ನಿ, ಒಂದು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧುಬಳಗವನ್ನು ಅಗಲಿದ್ದಾರೆ.

300x250 AD

ಕಳೆದ ಅನೇಕ ವರ್ಷಗಳಿಮದ ಉರಗಪ್ರೇಮಿಯಾಗಿಯೆ ಗುರುತಿಸಿಕೊಂಡಿದ್ದ ರಾಘವೇಂದ್ರ ವಿ.ನಾಯಕ ಅವರು ಈವರೆಗೆ ಸಹಸ್ರ ಸಂಖ್ಯೆಯಲ್ಲಿ ವಿವಿಧ ಜಾತಿಯ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವುದರ ಮೂಲಕ ಹಾವಿನ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಹುಕಾಲ ಬಾಳಿ ಬದುಕಬೇಕಿದ್ದ ರಾಘವೇಂದ್ರ ವಿ.ನಾಯಕ ಅವರ ಅಕಾಲಿಕ ಸಾವು ನಗರಕ್ಕೆ ತುಂಬಲಾರದ ನಷ್ಟ. ಅವರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top