Slide
Slide
Slide
previous arrow
next arrow

ಬ್ಯಾಗ್ ಮರಳಿಸಿದ ಹೋಟೆಲ್ ಮಾಲೀಕ: ಶ್ರೀಧರ ಶೆಟ್ಟಿ ಕಾರ್ಯಕ್ಕೆ ಮೆಚ್ಚುಗೆ

300x250 AD

ಶಿರಸಿ: ನಗರದ ಅಂಬೇಡ್ಕರ್ ಭವನದ ಹತ್ತಿರ ಇರುವ ನ್ಯೂ ಶೆಟ್ಟಿ ಫಿಶ್ ಲ್ಯಾಂಡ್ ಹೋಟೆಲ್ ನಲ್ಲಿ ಇತ್ತಿಚೆಗೆ ಗ್ರಾಹಕರೊಬ್ಬರು ಬಿಟ್ಟುಹೋದ ಬ್ಯಾಗನ್ನು ಹೋಟೆಲ್ ಮಾಲೀಕ ಪೋಲೀಸ್ ಇಲಾಖೆ ಮೂಲಕ ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಜೋಸೆಫ್ ಡಿಕೋಸ್ಟ ಕುಟುಂಬದವರು ₹ 13,490 ಹಣ ಹಾಗೂ ಮಹತ್ವದ ದಾಖಲೆಗಳಿರುವ ಬ್ಯಾಗನ್ನು ಹೊಟೆಲ್ ನಲ್ಲಿಯೇ ಬಿಟ್ಟು ಹೋಗಿದ್ದು, ಹೋಟೆಲ್ ಮಾಲೀಕ ಶ್ರೀಧರ್ ಶೆಟ್ಟಿ ತಮ್ಮ ಸಿಬ್ಬಂದಿ ಸಂದೇಶ್ ಮೂಲಕ ಹೊಸ ಮಾರುಕಟ್ಟೆ ಠಾಣೆಗೆ ತಲುಪಿಸಿದ್ದು, ಠಾಣಾ ಎಎಸ್ಐ ಧಾಕಪ್ಪ, ಹೊಸಮಾರುಕಟ್ಟೆ ಸಿಬ್ಬಂದಿ ಗಣಪತಿ ಬಂಟ್ ಮೂಲಕ ಬ್ಯಾಗ್ ಕಳೆದುಕೊಂಡ ವಾರಸುದಾರರಿಗೆ ತಲುಪಿಸಿದ್ದಾರೆ.
ಶ್ರೀಧರ್ ಶೆಟ್ಟಿಯವರ ಪ್ರಾಮಾಣಿಕತೆಗೆ ಪೊಲೀಸರು,ಗ್ರಾಹಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top