Slide
Slide
Slide
previous arrow
next arrow

ಸೆ. 10ಕ್ಕೆ ‘ನೃತ್ಯನಾದ ಮಹೋತ್ಸವ’

300x250 AD

ಶಿರಸಿ: ನಗರದ ಟಿ.ಆರ್.ಸಿ.ಬ್ಯಾಂಕ್ ಸಭಾಭವನದಲ್ಲಿ ನೃತ್ಯನಾದ ಅಕಾಡೆಮಿ ಆಫ್ ಡಾನ್ಸ್ ಆಂಡ್ ಮ್ಯೂಸಿಕ್ ಬೆಂಗಳೂರು ಹಾಗೂ ಪಂ.ಶ್ರೀಪಾದ್ ರಾವ್ ಕಲ್ಗುಂಡಿಕೊಪ್ಪ ಪೌಂಡೇಶನ್ ವತಿಯಿಂದ ಸೆ.10 ಶನಿವಾರ ಇಳಿಹೊತ್ತು 6 ಗಂಟೆಯಿಂದ ‘ನೃತ್ಯನಾದ ಮಹೋತ್ಸವ 2022’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅತಿಥಿ ಕಲಾವಿದರಾಗಿ ಖ್ಯಾತ ಕೊಳಲು ವಾದಕ ವಿ.ದೀಪಕ್ ಹೆಬ್ಬಾರ್ ಆಗಮಿಸಲಿದ್ದು ಇವರಿಗೆ ವಯೊಲಿನ್ ಸಾಥ್ ವಿ.ಜನಾರ್ಧನ್ ಶ್ರೀನಾಥ್ ಬೆಂಗಳೂರು, ಮೃದಂಗದಲ್ಲಿ ವಿ. ಅನೂರ್ ವಿನೋದ್ ಶ್ಯಾಮ್ ಬೆಂಗಳೂರು, ಘಟಂನಲ್ಲಿ ವಿ. ಶ್ರೀನಿಧಿ ಕೌಂಡಿನ್ಯ ಬೆಂಗಳೂರು ಸಾಥ್ ನೀಡಲಿದ್ದಾರೆ.

ನಂತರದಲ್ಲಿ ನಾಟ್ಯದೀಪ ತಂಡದವರಿಂದ ‘ಕರ್ಣ’ ಎಂಬ ನೃತ್ಯ ರೂಪಕ ನಡೆಯಲಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ

300x250 AD
Share This
300x250 AD
300x250 AD
300x250 AD
Back to top