• Slide
    Slide
    Slide
    previous arrow
    next arrow
  • ಚೆನ್ನಬಸವಣ್ಣನ ನೆಲದಲ್ಲಿ ಸೇವೆ ಮಾಡಲು ಪುಣ್ಯ ಬೇಕು: ಆರ್‌ವಿಡಿ

    300x250 AD

    ಜೊಯಿಡಾ: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜೊಯಿಡಾ- ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.
    ಜೊಯಿಡಾದ ಒಳಾಂಗಣ ಕ್ರೀಡಾಂಗಣ, ಲೋಕೋಪಯೋಗಿ ಇಲಾಖೆಯ ಅಂಬೋಳಿ- ಉಳವಿ- ಡಿಗ್ಗಿ- ಗೋವಾ ಗಡಿ ರಾಜ್ಯ ಹೆದ್ದಾರಿ 3.5 ಕಿ.ಮೀ. ರಸ್ತೆ ಭೂಮಿ ಪೂಜೆ, ಉಳವಿ ಗ್ರಾಮದ 193 ಮನೆಗಳಿಗೆ ನಳ ನೀರಿನ ವ್ಯವಸ್ಥೆ, ಚಾಪೇರಾ ಗ್ರಾಮದ ಸೇತುವೆ ಮತ್ತು ರಸ್ತೆ ಸುಧಾರಣೆ, ಉಳವಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಚಾಲನೆ ನೀಡಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್‌ವಿಡಿ, ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಜವಾಬ್ದಾರಿ. ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಿದಲ್ಲಿ ಅಭಿವೃದ್ಧಿ ಸಾಧ್ಯ. ಉಳವಿ ಚೆನ್ನಬಸವಣ್ಣನ ನೆಲದಲ್ಲಿ ಸೇವೆ ಮಾಡಲು ಪುಣ್ಯ ಬೇಕು. ಹಿಂದೆ ಉಳವಿ ದಟ್ಟವಾದ ಕಾಡಾಗಿತ್ತು. ಈಗ ಇಲ್ಲಿ ಎಲ್ಲಾ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ಉಳವಿ ದೇವಸ್ಥಾನದ ರಥಬೀದಿ ಕೆಲಸ ನಡೆಯುತ್ತಿದೆ. ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡುವುದೇ ಕಷ್ಟ, ಇಲ್ಲಿ ಅರಣ್ಯ ಇಲಾಖೆ ಅಡ್ಡಿ ಇದೆ. ಆದರೆ ಇದು ಅರಣ್ಯ ಇಲಾಖೆ ತಪ್ಪು ಎಂದು ನಾನು ಹೇಳುವುದಿಲ್ಲ. ಅರಣ್ಯ ಉಳಿಯಬೇಕು, ಜನರಿಗೂ ಅನುಕೂಲ ಆಗಬೇಕು. ಆ ದಿಕ್ಕಿನಲ್ಲಿ ಕೆಲಸ ಮಾಡುತ್ತೇನೆ. ಜನರಿಗೆ ಅನುಕೂಲ ಮಾಡುವುದೇ ನನ್ನ ಉದ್ದೇಶ ಎಂದರು.
    ಈ ಸಂದರ್ಭದಲ್ಲಿ ಮಹಿಳೆಯರಿಗೆ ಹೊಲಿಗೆ ಮಿಷನ್ ತೆಗೆದುಕೊಳ್ಳಲು ಸಹಾಯಧನ ಹಾಗೂ ಉಳವಿ ಗ್ರಾಮದಲ್ಲಿನ ವಿವಿಧ ದೇವಾಲಯಗಳಿಗೆ 19 ಲಕ್ಷ ರೂ. ಧನಸಹಾಯ ನೀಡಿದರು.
    ಈ ಸಂದರ್ಭದಲ್ಲಿ ಉಳವಿ ಗ್ರಾ.ಪಂ ಅಧ್ಯಕ್ಷೆ ಮಂಗಲಾ ಮಿರಾಶಿ, ಉಪಾಧ್ಯಕ್ಷ ಮಂಜುನಾಥ ಮೊಕಾಶಿ, ಜೊಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಜಿ.ಪಂ. ಮಾಜಿ ಸದಸ್ಯ ರಮೇಶ ನಾಯ್ಕ, ಲೋಕೋಪಯೋಗಿ ಇಲಾಖೆಯ ವಿಜಯಕುಮಾರ್, ಜಿ.ಪಂ. ಎಂಜಿನಿಯರಿಂಗ್ ಇಲಾಖೆಯ ಇಝಾನ ಮಹಮ್ಮದ್, ಗುಂದ ವಲಯ ಅರಣ್ಯಾಧಿಕಾರಿ ರಶ್ಮಿ ಹೆಗಡೆ, ಉಳವಿ ದೇವಸ್ಥಾನ ಅರ್ಚಕ ಶಂಕರಯ್ಯ ಕಲ್ಮಠ, ಉಳವಿ ಪಿಡಿಓ ಮಹಮ್ಮದ್ ಹನೀಫ್ ಹಾಗೂ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top