ಸಿದ್ದಾಪುರ: ತಮಿಳುನಾಡಿನಲ್ಲಿ ನಡೆದ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳನ್ನು ಒಳಗೊಂಡ ಫಸ್ಟ್ ಸೌಥ್ ಇಂಡಿಯಾ ಇಂಟರ್ ಸ್ಕೂಲ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಕರಾಟೆ ತರಬೇತಿ ಕೇಂದ್ರದ ಆನಂದ ನಾಯ್ಕ ಇವರ ವಿದ್ಯಾರ್ಥಿಗಳ ತಂಡ ಭಾಗವಹಿಸಿ 1 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಸಾಧನೆಯನ್ನು ಮಾಡಿದ್ದಾರೆ.
ಶಿರಸಿ ತರಬೇತಿ ಕೇಂದ್ರದ ತನ್ಮಯ್ ಡಿ.ರಾವ್ ಒಂದು ಚಿನ್ನ, ಒಂದು ಕಂಚಿನ ಪದಕ ಪಡೆದರೆ, ಸಮರ್ಥ್ ನಾಯಕ ಎರಡು ಕಂಚಿನ ಪದಕ ಪಡೆದಿದ್ದಾರೆ. ಸಿದ್ದಾಪುರ ಕರಾಟೆ ತರಬೇತಿ ಕೇಂದ್ರದ ಪ್ರತೀಕ್ ವಿ.ನೀಲಕಣೆ ಹಾಗೂ ಬಾಲಕೃಷ್ಣ ಆರ್.ನಾಯ್ಕ ತಲಾ ಒಂದು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇವರುಗಳ ಸಾಧನೆಗೆ ಕರಾಟೆ ತರಬೇತುದಾರರಾದ ಆನಂದ್ ನಾಯ್ಕ, ವಿದ್ಯಾರ್ಥಿಗಳ ತಂದೆ- ತಾಯಿ ಹಾಗೂ ಊರಿನ ಪ್ರಮುಖರುಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕರಾಟೆ ಚಾಂಪಿಯನ್ಶಿಪ್: ವಿದ್ಯಾರ್ಥಿಗಳ ಸಾಧನೆ
![](https://euttarakannada.in/wp-content/uploads/2022/08/29kar34-730x438.jpg?v=1661866217)