Slide
Slide
Slide
previous arrow
next arrow

ತಾಳಮದ್ದಳೆ: ಲಯನ್ಸ್’ಗೆ ದ್ವಿತೀಯ ಸ್ಥಾನ

300x250 AD

ಶಿರಸಿ; ಯಕ್ಷ ಶಾಲ್ಮಲಾ ಸ್ವರ್ಣವಲ್ಲೀಯವರು ಶ್ರೀ ಕ್ಷೇತ್ರ ಸ್ವರ್ಣವಲ್ಲಿಯಲ್ಲಿ ವತಿಯಿಂದ ಆ. 27 ಶನಿವಾರ ಮತ್ತು ಆ. 28 ರವಿವಾರದಂದು ಯಕ್ಷೋತ್ಸವ ಮಕ್ಕಳ ತಾಳಮದ್ದಳೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಶಾಲೆಯ ಕಿರಿಯ ಹಾಗೂ ಹಿರಿಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಹಿರಿಯರ ವಿಭಾಗದಲ್ಲಿ ವಿದ್ಯಾರ್ಥಿಗಳು ‘ಸುಗ್ರೀವ ಸಖ್ಯ’ ಎನ್ನುವ ತಾಳಮದ್ದಳೆ ಪ್ರದರ್ಶಿಸಿದರು. ಈ ತಾಳಮದ್ದಳೆಯಲ್ಲಿ ಕುಮಾರ್ ಆದಿತ್ಯ ಜೋಶಿ, ಕುಮಾರಿ ಅಯನಾ ವೈ, ಕುಮಾರಿ ಸುವಿಧಾ ಹೆಗಡೆ ಮತ್ತು ಕುಮಾರಿ ಸಹನಾ ಭಟ್ ಭಾಗವಹಿಸಿದ್ದರು.
ಕಿರಿಯರ ವಿಭಾಗದಲ್ಲಿ ವಿದ್ಯಾರ್ಥಿಗಳು ‘ನಚಿಕೇತ ಉಪಾಖ್ಯಾನ’ ಎನ್ನುವ ಅಂಕ ಪ್ರದರ್ಶಿಸಿ ದ್ವಿತೀಯ ಬಹುಮಾನವನ್ನು ಗಳಿಸಿದ್ದು ಗಮನಾರ್ಹ. ಈ ತಾಳಮದ್ದಳೆಯಲ್ಲಿ ಕುಮಾರ್ ಪ್ರಥಮ್ ಹೆಗಡೆ, ಕುಮಾರ್ ಚಿನ್ಮಯ್ ಕೆರೆಗೆದ್ದೆ, ಕುಮಾರ್ ಪಾರ್ಥ ಶೆಟ್ಟಿ , ಕುಮಾರಿ ಶ್ರಾವ್ಯ ಭಟ್ ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ನೀಡಿದ ಈ ಅತ್ಯುತ್ತಮ ಪಾಲ್ಗೊಳ್ಳುವಿಕೆಯ ಬಗ್ಗೆ ಮತ್ತು ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ,ಸಹ ಶಿಕ್ಷಕಿಯರಾದ ಶ್ರೀಮತಿ ಸೀತಾ ಭಟ್, ಶ್ರೀಮತಿ ವಿದ್ಯಾವತಿ ಭಟ್, ಕುಮಾರಿ ಯಶಸ್ವಿನಿ ಹೆಗಡೆ ಇವರುಗಳಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ತುಂಬು ಹೃದಯದ ಅಭಿನಂದನೆಗಳೊಂದಿಗೆ ಶ್ಲಾಘಿಸಿದೆ.

300x250 AD
Share This
300x250 AD
300x250 AD
300x250 AD
Back to top