• Slide
    Slide
    Slide
    previous arrow
    next arrow
  • KSRTC ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಂಗಲಾ ನಾಯ್ಕ ಹೆಸರು ಸೂಚಿಸಿ ಮನವಿ

    300x250 AD

    ಶಿರಸಿ: ಎನ್.ಡಬ್ಲ್ಯೂ. ಕೆ.ಎಸ್.ಆರ್.ಟಿ.ಸಿ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮಂಗಲಾ ನಾಯ್ಕ ಅವರಿಗೆ ನೀಡುವಂತೆ ಒತ್ತಾಯಿಸಿ  ಬಿ.ಜಿ.ಪಿ .ಸಕ್ರಿಯ ಅಭಿಮಾನಿಗಳು ಸರಕಾರಕ್ಕೆ ಮನವಿ ಸಲ್ಲಿಸಿದರು..

    ಸೋಮವಾರ ಪಕ್ಷದ ಸಂಘಟಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಹಾಗೂ ಸಂಸದ ಅನಂತ ಕುಮಾರ ಹೆಗಡೆ ಅವರ ಶಿರಸಿ ಕಛೇರಿಗೆ ತೆರಳಿ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

    ಯಲ್ಲಾಪುರ- ಮುಂಡಗೊಡ  ವಿಧಾನಸಭಾ ಕ್ಷೇತ್ರದಲ್ಲಿ ಮಂಗಲ ನಾಯ್ಕ ಅವರು ಪಕ್ಷವು ನೀಡುತ್ತಿರುವ ಸಂಘಟನಾ ಜವಾಬ್ದಾರಿಗಳನ್ನು ಸಕ್ರಿಯವಾಗಿ ಮತ್ತು ಸಮರ್ಥವಾಗಿ  ನಿಭಾಯಿಸುತ್ತಿದ್ದಾರೆ.ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು,ಎಲ್ಲಾ ಸಮುದಾಯದವರನ್ನು ವಿಶ್ವಾಶಕ್ಕೆ ಪಡೆದುಕೊಂಡು ಪಕ್ಷ ಬಲವರ್ಧನೆಗೆ  ಶ್ರಮಿಸುತ್ತಿರುವ ಮಂಗಲಾ ನಾಯ್ಕ ಅವರಿಗೆ ತೆರವುಗೊಂಡ ಎನ.ಡಬ್ಲ್ಯೂ. ಕೆ.ಎಸ್.ಆರ್.ಟಿ.ಸಿ. ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು  ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ..

    300x250 AD

    ಈ ವೇಳೆ ಪ್ರಮುಖರಾದ ರಾಘು ನಾಯ್ಕ, ಅನಿರುದ್ದ ನಾಯ್ಕ,ರವಿ ನಾಯ್ಕ, ಎ.ಕೆ.ನಾಯ್ಕ,ಸುದರ್ಶನ ಭಟ್,ಸುಭಾಷ್ ಮಡಿವಾಳ,ವಿನಾಯಕ ನಾಯ್ಕ, ಎಂ.ಬಿ.ನಾಯ್ಕ, ಅಣ್ಣಪ್ಪ ನಾಯ್ಕ, ಪವನ್ ನಾಯ್ಕ, ಮಾರುತಿ ಮಟ್ಟೆರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top