Slide
Slide
Slide
previous arrow
next arrow

ನದಿಗೆ ಬಿದ್ದವನ ಮೃತದೇಹ ಪತ್ತೆ

300x250 AD

ಯಲ್ಲಾಪುರ:   ತಾಲೂಕಿನ ಫಣಸಗುಳಿ ತಾತ್ಕಾಲಿಕ ಸೇತುವೆಯಿಂದ ನದಿಗೆ ಬಿದ್ದ ಲಾರಿಯಲ್ಲಿ ಸಿಲುಕಿದ್ದಾನೆಂದು ಹೇಳಲಾದ ವ್ಯಕ್ತಿಯ ಮೃತದೇಹ ಸೇತುವೆಯಿಂದ ಫಣಸಗುಳಿ-ಗುಳ್ಳಾಪುರ ನಡುವೆ ಪತ್ತೆಯಾಗಿದೆ.   

ಗೋಕರ್ಣ ಸಮೀಪದ ಹನೇಹಳ್ಳಿಯ ಸಂದೀಪ ಆಗೇರ (30) ಮೃತ ವ್ಯಕ್ತಿ. ಈತ ಕಳೆದ ಬುಧವಾರ ಲಾರಿಯಲ್ಲಿ ಕಲ್ಲು ತುಂಬಿಕೊಂಡು ಹೋಗುವಾಗ ಕೂಲಿಗಾಗಿ ಹೋಗಿದ್ದು, ಹೆಗ್ಗಾರಿಗೆ ಹೋಗಿ ಕಲ್ಲು ಹಾಕಿ ಮರಳಿ ಬರುವಾಗ ಫಣಸಗುಳಿ ಸೇತುವೆಯಿಂದ ಲಾರಿ ಗಂಗಾವಳಿ ನದಿಗೆ ಬಿದ್ದಿತ್ತು. ಅದರಲ್ಲಿದ್ದ 5 ಜನರನ್ನು ಸ್ಥಳೀಯರು ರಕ್ಷಿಸಿದ್ದು, ಸಂದೀಪ ಮಾತ್ರ ಪತ್ತೆಯಾಗಿರಲಿಲ್ಲ.   

300x250 AD

ಗುರುವಾರ ಇಡೀ ದಿನ ಸಂದೀಪನಿಗಾಗಿ ಶೋಧ ನಡೆಸಲಾಗಿತ್ತು. ಗುರುವಾರ ಸಂಜೆ ಲಾರಿಯನ್ನು ಮೇಲಕ್ಕೆತ್ತಿದ್ದರೂ ಲಾರಿಯಲ್ಲಿ ಆತ ಪತ್ತೆಯಾಗಿರಲಿಲ್ಲ. ಶುಕ್ರವಾರವೂ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಫಣಸಗುಳಿಯಿಂದ ಗುಳ್ಳಾಪುರದ ನಡುವೆ ನದಿಯಲ್ಲಿ ಶವ ಪತ್ತೆಯಾಗಿದೆ.

Share This
300x250 AD
300x250 AD
300x250 AD
Back to top