• Slide
    Slide
    Slide
    previous arrow
    next arrow
  • ತಾರತಮ್ಯ ಮಾಡದೇ ಚಿಕಿತ್ಸೆ ನೀಡಿ ವೈದ್ಯವೃತ್ತಿಯ ಮೌಲ್ಯ ಹೆಚ್ಚಿಸಬೇಕು:ಎಸಿ ದೇವರಾಜ್

    300x250 AD

    ಶಿರಸಿ: ವೈದ್ಯರೇ ದೇವರೆಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ತಾರತಮ್ಯ ಮಾಡದೇ ಸೇವೆ ನೀಡಬೇಕೆಂದು ಎ.ಸಿ ದೇವರಾಜ ಆ‌ರ್ ತಿಳಿಸಿದರು.

    ಅವರು ಭಾನುವಾರ ಶಿರಸಿಯ ನಾಡಿಗಲ್ಲಿಯಲ್ಲಿ ಡಾ. ಶ್ರೇಯಾ ಬಿ ಹೆಗಡೆ ದಂತ ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಸೇವೆ ಪವಿತ್ರವಾದ ಸೇವೆಯಾಗಿದ್ದು, ಇದರ ದುರುಪಯೋಗ ಪಡಿಸಿಕೊಳ್ಳಬಾರದು. ವೈದ್ಯರು ತಮ್ಮ ವೃತ್ತಿಯ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಎಂತಹ ಒತ್ತಡ ಬಂದರೂ ರೋಗಿಯನ್ನು ಮಾತ್ರ ಸಮಾಧಾನದಿಂದಲೇ ಉಪಚಾರ ಮಾಡಬೇಕೆಂದು ಹೇಳಿದರು.

    300x250 AD

    ಹಿರಿಯ ಮಕ್ಕಳ ತಜ್ಞ ಡಾ. ಎನ್.ಆರ್ ಹೆಗಡೆ ಮಾತನಾಡಿ, ರೋಗಿಯೊಂದಿಗೆ ಸ್ನೇಹ ಸಾಧಿಸಿ ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸ ವೈದ್ಯರಿಂದಾಗಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ.ರಾಜರಾಮ ಹೆಗಡೆ, ಡಾ.ಕೈಲಾಶ ಪೈ, ದಂತ ವೈದ್ಯೆ ಶ್ರೇಯಾ ಬಿ ಹೆಗಡೆ, ಭಾಸ್ಕರ ಎಸ್ ಹೆಗಡೆ, ಮಾಜಿ ಶಾಸಕ ವಿವೇಕಾನಂದ ವೈದ್ಯ ಮುಂತಾದವರು ಇದ್ದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top