Slide
Slide
Slide
previous arrow
next arrow

ಆ.20ಕ್ಕೆ ಶ್ರೀಕೃಷ್ಣ ಗಾನಾಮೃತ ಕಾರ್ಯಕ್ರಮ

300x250 AD

ಶಿರಸಿ :ನಗರದ ಟಿ.ಎಂ.ಎಸ್. ಸಭಾಭವನದಲ್ಲಿ ಆ.20 ಶನಿವಾರದಂದು ಸಂಜೆ 4.30ಕ್ಕೆ ಶ್ರೀಕೃಷ್ಣ ಗಾನಾಮೃತ ಎಂಬ ಭಜನ್ ಕಾರ್ಯಕ್ರಮವನ್ನು ಜನನಿ ಮ್ಯೂಜಿಕ ಸಂಸ್ಥೆ ಆಯೋಜಿಸಿದೆ. ಸಂಜೆ 4.30 ರಿಂದ ಸಂಸ್ಥೆಯ ಕಿರಿಯ ಹಾಗೂ ಹಿರಿಯ ಕಲಾವಿದರಿಂದ ಭಜನ್ ಕಾರ್ಯಕ್ರಮ ನಡೆಯಲಿದ್ದು ಇವರಿಗೆ ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ, ವಿಜಯೇಂದ್ರ ಹೆಗಡೆ ಅಜ್ಜಿಬಳ ಹಾಗೂ ಸಂಕೇತ ನಾಯ್ಕ ಸಹಕಾರ ನೀಡಲಿದ್ದಾರೆ. ನಂತರದಲ್ಲಿ ಸಮರ್ಥ ಹೆಗಡೆ ತಂಗಾರಮನೆ ಇವರ ಕೊಳಲುವಾದನ ನಡೆಯಲಿದ್ದು, ಇವರಿಗೆ ತಬಲಾದಲ್ಲಿ ಗಣೇಶ ಗುಂಡ್ಕಲ್ ಸಹಕರಿಸಲಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಗಾಯಕಿ ಶ್ರೀಮತಿ ರೇಖಾ ದಿನೇಶ ಶಿರಸಿ ಇವರ ಗಾಯನ ನಡೆಯಲಿದ್ದು ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾಗೂ ಕೊಳಲಿನಲ್ಲಿ ಸಮರ್ಥ ಹೆಗಡೆ ತಂಗಾರೆಮನೆ ಸಹಕರಿಸಲಿದ್ದಾರೆ ಎಂದು ಜನನಿ ಮ್ಯೂಜಿಕ ಸಂಸ್ಥೆ ಅಧ್ಯಕ್ಷ ದಿನೇಶ ಹೆಗಡೆ ಶಿರಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top