• Slide
    Slide
    Slide
    previous arrow
    next arrow
  • ಸದ್ಭಾವನಾ ಸಭಾಭವನದಲ್ಲಿ ಆ.18ಕ್ಕೆ ಛದ್ಮವೇಷ ಸ್ಪರ್ಧೆ

    300x250 AD

    ಶಿರಸಿ :ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.18 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಚರ್ಚ ರಸ್ತೆಯ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಸಭಾಭವನದಲ್ಲಿ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ.
    ಒಂದು ಶಾಲೆಯಿಂದ 2 ಮಕ್ಕಳು ಕೃಷ್ಣ ವೇಷದಲ್ಲಿ ಭಾಗವಹಿಸಬಹುದು.6 ವರ್ಷದ ಒಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕೃಷ್ಣನ ಜೊತೆ ರಾಧೆ, ಯಶೋಧೆ, ಸುಧಾಮ, ಅರ್ಜುನ, ಬಲರಾಮ, ಇತ್ಯಾದಿ ಛದ್ಮವೇಷಗಳನ್ನು ಪ್ರಸ್ತುತಪಡಿಸಬಹುದು. ನೃತ್ಯ ಹಾಗೂ ವ್ಯಕ್ತಿಗತ ಭಾಗವಹಿಸುವಿಕೆಗೆ ಬೇರೆ ಬಹುಮಾನವಿದೆ. ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಒಂದು ಶಾಲೆಯಿಂದ ಒಂದು ದೇಶ ಭಕ್ತರ ಛದ್ಮವೇಷಕ್ಕೆ ಅವಕಾಶವಿದೆ, ಎಂದು ಬಿ.ಕೆ.ವೀಣಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top