Slide
Slide
Slide
previous arrow
next arrow

ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

300x250 AD

ಕುಮಟಾ:  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ,ಸ್ವಾತಂತ್ರ್ಯೋತ್ಸವದ 75ನೇ ವರ್ಷದ  ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ , ಮಾಜಿ ಯೋಧರಾದ ಎನ್. ಪ್ರಕಾಶ ಜಿ. ಪಟಗಾರರವರು ಧ್ವಜಾರೋಹಣ ನೇರವೇರಿಸಿದರು ಹಾಗೂ ಅವರ ಧರ್ಮಪತ್ನಿ ಹಾಲಿ ಯೋಧೆ ಸುಬೇಧಾರ್ ಶ್ರೀಮತಿ ಕಮಲಾವತಿ ಪಟಗಾರರವರು, ನಿವೃತ್ತ ಪ್ರಾಂಶುಪಾಲರಾದ ಎಸ್. ಎನ್. ಭಟ್, ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವಿಷ್ಣು ಪಟಗಾರ, ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶೀಮತಿ ಲೀನಾ ಎಂ. ಗೊನೇಹಳ್ಳಿ, ವಿದ್ಯಾರ್ಥಿಗಳು,  ಪೋಷಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು  ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಮಾಜಿ ಯೋಧರಾದ ಎನ್. ಪ್ರಕಾಶ ಜಿ. ಪಟಗಾರರವರು ತಮ್ಮ ಸ್ಪೂರ್ತಿದಾಯಕ ದೇಶಪ್ರೇಮದ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿಷ್ಣು ಪಟಗಾರರವರು ನಮ್ಮ ದೇಶದ ಯೋಧರ ತ್ಯಾಗ, ಬಲಿದಾನದ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳು ದೇಶಾಭಿಮಾನ ಬೆಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಎಸ್. ಎನ್. ಭಟ್ ಸ್ವಾತಂತ್ರ್ಯ ನಮ್ಮ ದೇಶಕ್ಕೆ ಹೇಗೆ ದೊರೆಯಿತು ಎನ್ನುವುದನ್ನು ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು. 

300x250 AD

ಶಿಕ್ಷಕಿ ಏಂಜಲ್ ಡಿಸೋಜ ಮತ್ತು ಕುಮಾರಿ ಮೈಥಿಲಿ ಬಾಳೆ ಕಾರ್ಯಕ್ರಮ ನಿರೂಪಿಸಿದರು.  ಶೀಮತಿ ಲೀನಾ ಎಂ. ಗೊನೇಹಳ್ಳಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಹೋರಾಟಗಾರರ ಆದರ್ಶವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.  ಕುಮಾರ ಅಂಗದ ಸ್ವಾಗತಿಸಿದನು.  ಆರೀಝ್ ವಂದಿಸಿದನು. ವಿದ್ಯಾರ್ಥಿಗಳ ಸ್ವಾತಂತ್ತ್ಯ ಹೋರಾಟಗಾರರ ವಿವಿಧ ವಿಭಿನ್ನ ಛದ್ಮವೇಷ, ರೂಪಕಗಳು,   ಭಾಷಣ, ದೇಶಭಕ್ತಿ ಗೀತೆ, ದೇಶಾಭಿಮಾನ ಮೂಡಿಸುವ ನೃತ್ಯ ಜನಮನಸೂರೆಗೊಂಡಿತು.

Share This
300x250 AD
300x250 AD
300x250 AD
Back to top