Slide
Slide
Slide
previous arrow
next arrow

ಸ್ವಾತಂತ್ರ್ಯ ದಿನಾಚರಣೆ:ಪುಟಾಣಿಗಳಿಂದ ನಾಟಕ ಪ್ರದರ್ಶನ

300x250 AD

ಶಿರಸಿ:ತಾಲೂಕಿನ ಕಿ.ಪ್ರಾ. ಶಾಲೆ ಪುಟ್ಟನಮನೆಯಲ್ಲಿ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಆ.13ರ ಬೆಳಿಗ್ಗೆ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆ.15ರಂದು 1 ರಿಂದ 4ನೇ ತರಗತಿ ಮಕ್ಕಳು ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ನಾಟಕವನ್ನು ಸುಂದರವಾಗಿ ಪ್ರದರ್ಶಿಸಿದರು. ನಾಟಕದ ಸಾಹಿತ್ಯ ನೀಡಿ ಮಾರ್ಗದರ್ಶನ ನೀಡಿದ ನಿವೃತ್ತ ಪ್ರೊಪೆಸರ್ ಅಮರನಾಥರನ್ನು ಸನ್ಮಾನಿಸಲಾಯಿತು. ನಾರಾಯಣ ಗ. ಹೆಗಡೆ ಇವರು ಮಕ್ಕಳಿಗೆ ಕಂಪಾಸ ವಿತರಿಸಿದರು. ಧರ್ಮಸ್ಥಳ ಸಂಘದವರ ಸಹಕಾರ, ಎಸ್.ಡಿ.ಎಂ.ಸಿ. ಹಳೆವಿದ್ಯಾರ್ಥಿ, ಶಿಕ್ಷಕರ ಸಂಪೂರ್ಣ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು. ಇಲಾಖೆಯಿಂದ BRP ದೀಪಕ ಗೋಕರ್ಣ ಹಾಗೂ CRP ಗಳಾದ ಗಣೇಶ ಸರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕರು ಸ್ವಾಗತಿಸಿ ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top