• Slide
    Slide
    Slide
    previous arrow
    next arrow
  • ಶ್ರೀಕೃಷ್ಣ ಜನ್ಮಾಷ್ಟಮಿ:ಮಕ್ಕಳ ಕೃಷ್ಣ ವೇಷ ಸ್ಪರ್ಧೆಗೆ ಆಹ್ವಾನ

    300x250 AD

    ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ವತಿಯಿಂದ ರಂಗ ಸಹ್ಯಾದ್ರಿ ಹಾಗೂ  ಗೌತಮ್ ಜ್ಯುವೆಲರ್ಸ ಯಲ್ಲಾಪುರ ಇವರ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷದ ಫೋಟೋ ಸ್ಪರ್ಧೆ-2022 ನ್ನು ಆಯೋಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಆಸಕ್ತರು 6 ವರ್ಷದೊಳಗಿನ ಮಕ್ಕಳ ಮುದ್ದು ಕೃಷ್ಣ ವೇಷದ ಫೋಟೋವನ್ನು ಈ ಸ್ಪರ್ಧೆಗೆ ಕಳಿಸಲು ಕೋರಲಾಗಿದೆ. ತೀರ್ಪುಗಾರರಿಂದ ಆಯ್ಕೆಗೊಂಡ 3 ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ,  ನಗದು ಬಹುಮಾನ, ಪಾರಿತೋಷಕ, ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುವುದು ಹಾಗೂ 10 ಫೋಟೋಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಗುವುದು.

    ಈ ಸ್ಪರ್ಧೆಗೆಂದೇ 6 ವರ್ಷದೊಳಗಿನ  ಮಗುವಿಗೆ ಕೃಷ್ಣ ವೇಷ ತೊಡಿಸಿ, ಕ್ಲಿಕ್ಕಿಸಿದ  ಫೋಟೋವನ್ನು ಮಾತ್ರ ಕಳುಹಿಸಬೇಕು. ( ಹಳೆಯ ಫೋಟೋಗಳಿಗೆ ಅವಕಾಶ ಇಲ್ಲ)

    300x250 AD

    ಫೋಟೋದೊಂದಿಗೆ ಮಗುವಿನ ಹೆಸರು, ಊರು, ವಿಳಾಸ, ಹುಟ್ಟಿದ ದಿನಾಂಕ, ಪಾಲಕರ ಫೋನ್ ನಂಬರ್ ಕಡ್ಡಾಯವಾಗಿ ಕಳುಹಿಸಬೇಕು.ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು,  ಆ.15 ರೊಳಗೆ  ವಾಟ್ಸಪ್ ನಂಬರ್   8431662869 ಗೆ ಫೋಟೋ ಕಳಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top